ADVERTISEMENT

ಕರ್ಫ್ಯೂ ಸಡಿಲಿಕೆ ರೈತರಿಗೆ ಮಾತ್ರ ಅನ್ವಯ

ಕೋವಿಡ್‌ ತಡೆಗೆ ಕಮಲನಗರ ತಾಲ್ಲೂಕಿನ ಮೂರು ಕಡೆ ಚೆಕ್‍ಪೋಸ್ಟ್‌ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:05 IST
Last Updated 3 ಮೇ 2021, 3:05 IST
ಕಮಲನಗರ ಚೆಕ್‌ಪೋಸ್ಟ್‌ನಲ್ಲಿ ಮಹಾರಾಷ್ಟ್ರದಿಂದ ಬರುವ-–ಹೋಗುವ ಪ್ರಯಾಣಿಕರನ್ನು ಡಿವೈಎಸ್‍ಪಿ ಡಾ.ದೇವರಾಜ ತಪಾಸಣೆ ಮಾಡಿದರು. ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್‍ಐ ನಂದಿನಿ ಎಸ್ ಇದ್ದರು
ಕಮಲನಗರ ಚೆಕ್‌ಪೋಸ್ಟ್‌ನಲ್ಲಿ ಮಹಾರಾಷ್ಟ್ರದಿಂದ ಬರುವ-–ಹೋಗುವ ಪ್ರಯಾಣಿಕರನ್ನು ಡಿವೈಎಸ್‍ಪಿ ಡಾ.ದೇವರಾಜ ತಪಾಸಣೆ ಮಾಡಿದರು. ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್‍ಐ ನಂದಿನಿ ಎಸ್ ಇದ್ದರು   

ಕಮಲನಗರ: ‘ಪಟ್ಟಣಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ ಹೇಳಿದರು.

ತಾಲ್ಲೂಕಿನ ಮಹಾರಾಷ್ಟ್ರ ಗಡಿ ಸಮೀಪ ಸ್ಥಾಪಿಸಿರುವ ಚೆಕ್‍ಪೋಸ್ಟ್‌ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಅವರು ಮಾತನಾಡಿದರು.

‘ಕೋವಿಡ್ ಎರಡನೇ ಅಲೆ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಕಮಲನಗರ ಪಟ್ಟಣ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಳುಹಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

ಮುಂಬೈ, ಪುಣೆ, ಲಾತೂರು, ಉದಗೀರ, ದೇವಣಿ ದೇಗಲೂರು ಕಡೆಯಿಂದ ಬೀದರ್‌ಗೆ ಬರುವ ವಾಹನ ಸವಾರರು ಕಮಲನಗರ, ಮುರ್ಕಿ ಮತ್ತು ಚಿಕ್ಲಿ (ಯು), ಎಕಂಬಾ, ಲಖ್ಖಣಗಾಂವ್, ನಾರಾಯಣಪುರ ಚೆಕ್‌ಪೋಸ್ಟ್‌ಗಳ ಮೂಲಕ ಬರಬೇಕು.

ಕಮಲನಗರ ಚೆಕ್‌ಪೋಸ್ಟ್ ಮೂಲಕ ಭಾನುವಾರ ಸಂಜೆವರೆಗೂ 60ಕ್ಕೂ ಅಧಿಕ ಜನ ಹೊರರಾಜ್ಯದಿಂದ ಮರಳಿದ್ದು ಹೋಂ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.

ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್‍ಐ ನಂದಿನಿ ಎಸ್., ಅಜಯಸಿಂಗ್‌ ಠಾಕೋರ್, ಸ್ವಾಮಿ, ಆರೋಗ್ಯ ಕೇಂದ್ರ ಸಿಬ್ಬಂದಿ ಲಹು, ಚಿಕ್ಲಿ ಚೆಕ್‌ಪೋಸ್ಟ್‌ನಲ್ಲಿ ಹೋಕರ್ಣಾ ಪಿಎಸ್‍ಐ ರಮೇಶ ಟೋಕರೆ, ಎಎಸ್‍ಐ ಮಲ್ಲಿಕಾರ್ಜುನ ಬಿರಾದಾರ, ಎಎಸ್‍ಐ ಗುರುನಾಥ, ಕಾನ್‌ಸ್ಟೆಬಲ್‌ ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.