ಬೀದರ್: ಬೆಂಗಳೂರಿನ ರಾಜಭವನದ ಗೋಶಾಲೆಗೆ ಸೋಮವಾರ ಬೀದರ್ ಜಿಲ್ಲೆಯ ದೇವಣಿ ತಳಿಯ ಹಸುಗಳು ಸೇರ್ಪಡೆಯಾಗಿವೆ.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ರಾಜಭವನಕ್ಕೆ ಆಗಮಿಸಿದ ಗೋವುಗಳಿಗೆ ಪೂಜೆ ಮಾಡಿ ಹಣ್ಣು ತಿನ್ನಿಸಿ ಬರ ಮಾಡಿಕೊಂಡರು.
ದೇಸಿ ಗೋವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದೇಶಿ ತಳಿಗಳ ಬದಲಾಗಿ ದೇಸಿಯ ತಳಿಗಳ ಸಾಕಾಣಿಕೆಗೆ ಪ್ರೇರಣೆ ನೀಡಲು ರಾಜಭವನಕ್ಕೆ ಎರಡು ದೇವಣಿ ಹಸುಗಳನ್ನು ತರಲಾಗಿದೆ ಎಂದರು.
ದೇವಣಿ ತಳಿ ಹಸುಗಳು ಬಿಸಿಲನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿವೆ. ಕಠಿಣ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ ಹಾಗೂ ರೋಗ ನಿರೋಧಕ ಶಕ್ತಿ ಇವುಗಳಿಗೆ ಇದೆ.
ರಾಜಭವನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವದ ದೇವಣಿ ತಳಿ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ.ಪ್ರಕಾಶ ರಾಠೋಡ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.