ಬೀದರ್: ವಿಶ್ವ ವಿಕಲಚೇತನರ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಯು.ಡಿ.ಐ.ಡಿ ಹಾಗೂ 21 ಬಗೆಯ ಅಂಗವಿಕಲತೆ ಅರಿವು ಕಾರ್ಯಕ್ರಮ ನಗರದ ಮಯೂರ ಬರೀದ್ಶಾಹಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕಡ್ಯಾಳ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಾಜಕುಮಾರ ಮೂಲಭಾರತಿ, ವಿಶಾಲ ದೊಡ್ಡಿ, ದಿಲೀಪ್ ಕಾಡವಾದ ಮಂಗಲಾ ಮರಕಲೆ, ಬಾಬುರಾವ್ ರಾಠೋಡ್ ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ಸುನೀಲ ಮೇತ್ರೆ ಚಾಂಬೋಳ ಅಧ್ಯಕ್ಷತೆ ವಹಿಸಿದ್ದರು.
ರವಿಕುಮಾರ ವಾಘಮಾರೆ, ಶಿವರಾಜ್ ತಡಪಳ್ಳಿ, ರಾಹುಲ್ ಡಾಂಗೆ, ಪಪ್ಪು ಯರನಳ್ಳಿ ಇದ್ದರು. ಸಂದೀಪ ಕಾಂಟೆ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.