ADVERTISEMENT

ವಿಶೇಷ ಚೇತನರಿಗಾಗಿ ₹1 ಕೋಟಿ ವೆಚ್ಚದ ಸೌಲಭ್ಯ ವಿತರಣೆ: ಶಾಸಕ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 15:39 IST
Last Updated 23 ಸೆಪ್ಟೆಂಬರ್ 2024, 15:39 IST
ಔರಾದ್ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್ ವಿಶೇಷಚೇತನರಿಗೆ ಸೌಲಭ್ಯ ವಿತರಿಸಿದರು
ಔರಾದ್ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್ ವಿಶೇಷಚೇತನರಿಗೆ ಸೌಲಭ್ಯ ವಿತರಿಸಿದರು   

ಔರಾದ್: ‘ತಾಲ್ಲೂಕಿನ ವಿಶೇಷ ಚೇತನರಿಗಾಗಿ ₹1 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.

ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಸೋಮವಾರ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

‘ವಿಶೇಷ ಚೇತನರು ಕುಟುಂಬ ಹಾಗೂ ಸಮಾಜಕ್ಕೆ ಭಾರವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅವರಿಗಾಗಿ ವಿಶೇಷ ಯೋಜನೆ ರೂಪಿಸಿದೆ. ವಿಶೇಷ ಚೇತನರಿಗಾಗಿ ಮಂಜೂರಾದ ಮನೆ ಅವರಿಗೆ ಕೊಡಬೇಕು. ಯಾವುದೇ ಕಾರಣಕ್ಕೂ ಅವರ ಬಳಿ ಹಣ ತೆಗೆದುಕೊಳ್ಳಬಾರದು. ಇಂತಹ ಜನರಿಗೆ ನಾನು ಯಾವಾಗಲೂ ಸಹಾಯ ಮಾಡಲು ಸಿದ್ಧ’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಫಲಾನುಭವಿ ವಿಶೇಷ ಚೇತನರಿಗೆ ಟ್ರೈ ಸೈಕಲ್, ವೀಲ್ ಚೇರ್, ಬ್ಯಾಟರಿ ಚಾಲಿತ ಸೈಕಲ್, ಅಂಧರ ಕೋಲು, ಕೃತಕ ಕಾಲು, ಕೃತ ಕೈ, ಅಂಧರ ಮೊಬೈಲ್ ಫೋನ್ ಸೇರಿದಂತೆ ಒಟ್ಟು 141 ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಾಲ್ಲೂಕು ಪಂಚಾಯತ್ ಇಒ ಬೀರೇಂದ್ರಸಿಂಗ್ ಠಾಕೂರ್, ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಬಸವರಾಜ, ದೇವೇಂದ್ರ, ಚನ್ನಬಸಪ್ಪ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.