ADVERTISEMENT

ನೂರು ಪುರೋಹಿತರಿಗೆ ಆಹಾರಧಾನ್ಯ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:15 IST
Last Updated 17 ಜೂನ್ 2021, 15:15 IST
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡದಲ್ಲಿ ಅರ್ಚಕರಿಗೆ ಆಹಾರಧಾನ್ಯ ಕಿಟ್‌ ವಿತರಿಸಲಾಯಿತು
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡದಲ್ಲಿ ಅರ್ಚಕರಿಗೆ ಆಹಾರಧಾನ್ಯ ಕಿಟ್‌ ವಿತರಿಸಲಾಯಿತು   

ಬೀದರ್‌: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಬುಧವಾರ ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನ ಪುರೋಹಿತರಿಗೆ ಆಹಾರ ಕಿಟ್ ವಿತರಿಸಲಾಯಿತು.

ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ ತಲಾ 40 ಪುರೋಹಿತರಿಗೆ ಹಾಗೂ ಬೀದರ್‌ನಲ್ಲಿ 20 ಜನರಿಗೆ ಸೇರಿ ಒಟ್ಟು ನೂರು ಪುರೋಹಿತರಿಗೆ ಕಿಟ್‌ ವಿತರಣೆ ಮಾಡಲಾಯಿತು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೀಕ್ಷಿತ, ಉಪಾಧ್ಯಕ್ಷ ಅಕ್ಷಯ್ ದೀಕ್ಷಿತ, ಕಾರ್ಯದರ್ಶಿ ಗಿರಿಧರ ಜೋಶಿ, ಖಜಾಂಚಿ ಅನಂತ ಜೋಶಿ, ನಿರ್ದೇಶಕರಾದ ಪ್ರವೀಣ ಜೋಶಿ, ಸಚಿನ್ ಜೋಶಿ, ಶಿವಕುಮಾರ ಭಟ್ ಹಾಗೂ ಗಜಾನನ ಜೋಶಿ, ಶ್ರೀನಿವಾಸ ಕುಲಕರ್ಣಿ ಹಾಗೂ ವರುಣ ಜೋಶಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.