ADVERTISEMENT

ಜನವಾಡ 20 ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:01 IST
Last Updated 29 ಸೆಪ್ಟೆಂಬರ್ 2020, 7:01 IST
ಮಲ್ಕಾಪುರ ಬಳಿ ವಶಪಡಿಸಿಕೊಳ್ಳಲಾದ ಗಾಂಜಾ ಹಾಗೂ ಬಂಧಿತ ಆರೋಪಿಗಳು
ಮಲ್ಕಾಪುರ ಬಳಿ ವಶಪಡಿಸಿಕೊಳ್ಳಲಾದ ಗಾಂಜಾ ಹಾಗೂ ಬಂಧಿತ ಆರೋಪಿಗಳು   

ಜನವಾಡ: ತೆಲಂಗಾಣದಿಂದ ಬೈಕ್‍ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಕೆ.ಜಿ. ಗಾಂಜಾವನ್ನು ಸಿಇಎನ್ ಅಪರಾಧ ಪೊಲೀಸ್ ಠಾಣೆ ಸಿಬ್ಬಂದಿ ಬೀದರ್ ತಾಲ್ಲೂಕಿನ ಮಲ್ಕಾಪುರ ಬಳಿ ಭಾನುವಾರ ವಶಪಡಿಸಿಕೊಂಡಿದ್ದಾರೆ.

ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ನ್ಯಾಲಕಲ್ ತಾಂಡಾದ ಪ್ರಕಾಶ ರಾಠೋಡ ಹಾಗೂ ಬೀದರ್ ತಾಲ್ಲೂಕಿನ ಸಿಂದೋಲ್ ತಾಂಡಾದ ರಾಜೇಂದ್ರ ರಾಠೋಡ ಎಂಬುವರನ್ನು ಬಂಧಿಸಿ, ಎರಡು ಬೈಕ್‍ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಬೀದರ್‌ನ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.