ADVERTISEMENT

ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:59 IST
Last Updated 26 ಏಪ್ರಿಲ್ 2025, 15:59 IST
ಕಲಬುರ್ಗಿ ಜಿಲ್ಲೆ ರಟಕಲ್‌ ಗ್ರಾಮ: ಸಾಲಬಾಧೆ– ರೈತ ಆತ್ಮಹತ್ಯೆ
ಕಲಬುರ್ಗಿ ಜಿಲ್ಲೆ ರಟಕಲ್‌ ಗ್ರಾಮ: ಸಾಲಬಾಧೆ– ರೈತ ಆತ್ಮಹತ್ಯೆ   

ಸಂಗೋಳಗಿ ತಾಂಡಾ(ಜನವಾಡ): ಸಾಲಬಾಧೆ ತಾಳದೆ ಬೀದರ್ ತಾಲ್ಲೂಕಿನ ಸಂಗೋಳಗಿ(ಎ) ತಾಂಡಾದಲ್ಲಿ ರೈತರೊಬ್ಬರು ಶನಿವಾರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೋಹರ ಗಣಪತಿ ರಾಠೋಡ್ (55) ಆತ್ಮಹತ್ಯೆಗೆ ಶರಣಾದವರು.

ಕೃಷಿಗಾಗಿ ಖಾಸಗಿ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದರು. ಬೆಳೆ ಬೆಳೆಯದ ಕಾರಣ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ನೀಲಗಿರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪಿಎಸ್‍ಐ ಕಿರಣ ಎಸ್.ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.