ADVERTISEMENT

ಬೀದರ್: ವಿದ್ಯುತ್‌ ತಗುಲಿ ಕಬ್ಬು ಭಸ್ಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 10:51 IST
Last Updated 26 ಅಕ್ಟೋಬರ್ 2021, 10:51 IST

ಮಂಗಲಗಿ (ಚಿಟಗುಪ್ಪ): ಗ್ರಾಮದ ತೋಟವೊಂದರಲ್ಲಿ ವಿದ್ಯುತ್‌ ಅವಘಡ ಸಂಭವಿಸಿ, ಮೂರು ಎಕರೆ ಕಬ್ಬು ಭಸ್ಮವಾಗಿದೆ.

ಶ್ರೀನಿವಾಸ ರಡ್ಡಿ ಕೊಂತಮ್‌ ಎನ್ನುವವರ ತೋಟದಲ್ಲಿ ವಿದ್ಯುತ್‌ ತಂತಿ ಸ್ಪರ್ಶದಿಂದ ಕಬ್ಬಿಗೆ ಬೆಂಕಿ ತಗುಲಿದೆ.

ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ADVERTISEMENT

‘ಕಬ್ಬಿನ ತೋಟದ ನಡುವಿನಿಂದ ವಿದ್ಯುತ್‌ ತಂತಿ ಹಾದು ಹೋದ ಕಾರಣ ಈ ಅವಘಡ ಸಂಭವಿಸಿದೆ’ ಎಂದು ರೈತ ಶ್ರೀನಿವಾಸ ರಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.