ADVERTISEMENT

ಔರಾದ್; ಸರ್ಕಾರಿ ಶಿಕ್ಷಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 6:52 IST
Last Updated 10 ನವೆಂಬರ್ 2021, 6:52 IST
ವಿಜಯಕುಮಾರ
ವಿಜಯಕುಮಾರ   

ಔರಾದ್: ತಾಲ್ಲೂಕಿನ ಕರಂಜಿ (ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯಕುಮಾರ ಧೊಂಡಿಬಾ ಟಿಳೆಕರ್ (45) ಅವರ ಹತ್ಯೆ ಮಾಡಲಾಗಿದೆ.

ಔರಾದ್ ಸಮೀಪದ ನರಸಿಂಹಪುರ ತಾಂಡಾದ ಮಾರ್ಗದಲ್ಲಿ ಮಂಗಳವಾರ ಅವರ ಶವ ಪತ್ತೆಯಾಗಿದೆ. ಮುಖ ಹಾಗೂ ಶರೀರದ ಕೆಳ ಭಾಗದಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠ ಡಿ.ಎಲ್. ನಾಗೇಶ್, ಸಿಪಿಐ ರವೀಂದ್ರನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.