ಬೀದರ್: 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ಪ್ರದಾನ ಮಾಡಲಾಯಿತು.
ವಿಜೇತರಾದ ವಿದ್ಯಾರ್ಥಿಗಳ ವಿವರ ಹೀಗಿದೆ:
ಪ್ರಬಂಧ ಸ್ಪರ್ಧೆ: ರಿಯಾ ಅಹಮ್ಮದ್ (ಪ್ರಥಮ), ಅತಿಥಿ ಆರ್ಯಾ (ದ್ವಿತೀಯ) ಹಾಗೂ ರುಚಿತಾ ಪಾಟೀಲ (ತೃತೀಯ).
ವಾಕ್ಚಾತುರ್ಯ ಸ್ಪರ್ಧೆ: ರೋಹಿಣಿ (ಪ್ರಥಮ), ಸೈಯದಾ ಅಸಫಾ (ದ್ವಿತೀಯ) ಮತ್ತು ಇಶಾನಿ (ತೃತೀಯ).
ಆಶುಭಾಷಣ ಸ್ಪಧೆ: ಇಶಾನಿ (ಪ್ರಥಮ), ಸೈಯದಾ ನಿದಾ ನೌಶೀನ್ (ದ್ವಿತೀಯ) ಹಾಗೂ ಸಿದ್ಧಾರ್ಥ (ತೃತೀಯ).
ಗಾಯನ ಸ್ಪಧೆ: ಅಮೂಲ್ಯ (ಪ್ರಥಮ), ಭವಾನಿ (ದ್ವಿತೀಯ) ಮತ್ತು ಮೆಹರಿನ್ (ತೃತೀಯ).
ಬಹುಮಾನ ವಿತರಣೆ: ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ಎನ್. ರಾಜು, ಮುಖ್ಯಶಿಕ್ಷಕಿ ಆರೀಫ್ ಹಾದಿ, ಅಮಜದ್ ಅಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.