ADVERTISEMENT

ಮಾಂಗಲ್ಯ ಮರಳಿಸಿ ಪ್ರಾಮಾಣಿಕತೆ ಮೆರೆದ ಗುರುನಾಥ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:19 IST
Last Updated 24 ಜೂನ್ 2021, 5:19 IST
ಪಡಿತರ ಅಂಗಡಿಯಲ್ಲಿ ಸಿಕ್ಕಿದ್ದ ಬಂಗಾರದ ಮಾಂಗಲ್ಯವನ್ನು ಭಾಗ್ಯಶ್ರೀ ಅವರಿಗೆ ಗುರುನಾಥ ಸ್ವಾಮಿ ನೀಡಿದರು
ಪಡಿತರ ಅಂಗಡಿಯಲ್ಲಿ ಸಿಕ್ಕಿದ್ದ ಬಂಗಾರದ ಮಾಂಗಲ್ಯವನ್ನು ಭಾಗ್ಯಶ್ರೀ ಅವರಿಗೆ ಗುರುನಾಥ ಸ್ವಾಮಿ ನೀಡಿದರು   

ಖಟಕಚಿಂಚೋಳಿ: ಇಲ್ಲಿಗೆ ಸಮೀಪದ ದುಬಲಗುಂಡಿ ಗ್ರಾಮದ ಪಡಿತರ ಅಂಗಡಿಯಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಸುಮಾರು ₹6 ಸಾವಿರ ಮೌಲ್ಯದ ಬಂಗಾರದ ಮಾಂಗಲ್ಯವನ್ನು ಪಡಿತರ ಅಂಗಡಿಯ ಮಾಲೀಕ ಗುರುನಾಥ ಸ್ವಾಮಿ ಮಹಿಳೆಗೆ ಮರಳಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ದಿನನಿತ್ಯ ಪಡಿತರ ಪಡೆಯಲು ನೂರಾರು ಜನ ಅಂಗಡಿಗೆ ಬರುತ್ತಾರೆ. ಹೀಗಾಗಿ ಈ ಬಂಗಾರದ ಮಾಂಗಲ್ಯ ಯಾರದೆಂದು ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ಪಂಚಾಯಿತಿ ಸದಸ್ಯ ಭೀಮ ಅವರಿಗೆ ತಿಳಿಸಿದೆ. ಅವರು ಗ್ರಾಮದವರಿಗೆ ಸಂಪರ್ಕಿಸಿದಾಗ ಈ ಮಾಂಗಲ್ಯ ಭಾಗ್ಯಶ್ರೀ ಅವರದ್ದು ಎಂದು ತಿಳಿಯಿತು. ನಂತರ ಆ ಮಹಿಳೆಯನ್ನು ಅಂಗಡಿಗೆ ಕರೆಯಿಸಿ ಮಾಂಗಲ್ಯ ನೀಡಿದೆವು’ ಎಂದು ಗುರುನಾಥ ಸ್ವಾಮಿ ಹೇಳಿದರು.

ಗುರುನಾಥ ಸ್ವಾಮಿ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.