ADVERTISEMENT

ಬೀದರ್‌ ನಗರದಲ್ಲಿ ಅಬ್ಬರಿಸಿದ ಮಳೆ

ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 14:12 IST
Last Updated 6 ಜುಲೈ 2021, 14:12 IST
ಧಾರಾಕಾರವಾಗಿ ಸುರಿದ ಮಳೆಗೆ ಬೀದರ್‌ನ ರೈಲ್ವೆ ನಿಲ್ದಾಣ ಸಮೀಪದ ಹರಳಯ್ಯ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹವಾದ ನೀರಿನಲ್ಲೇ ಸಾಗಿದ ವಾಹನಗಳು
ಧಾರಾಕಾರವಾಗಿ ಸುರಿದ ಮಳೆಗೆ ಬೀದರ್‌ನ ರೈಲ್ವೆ ನಿಲ್ದಾಣ ಸಮೀಪದ ಹರಳಯ್ಯ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹವಾದ ನೀರಿನಲ್ಲೇ ಸಾಗಿದ ವಾಹನಗಳು   

ಬೀದರ್‌: ತಾಲ್ಲೂಕಿನಲ್ಲಿ ಮಂಗಳವಾರ ಒಂದು ಗಂಟೆ ಧಾರಾಕಾರ ಮಳೆ ಸುರಿದಿದೆ.

ನಗರದ ತಗ್ಗು ಪ್ರದೇಶದಲ್ಲಿರುವ ಸಿಎಂಸಿ ಕಾಲೊನಿ, ಕೆಇಬಿ ಕಾಲೊನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ಜ್ಯೋತಿ ಕಾಲೊನಿಯಲ್ಲಿ ಗಟಾರು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿತು. ಮನೆಯವರು ಬಕೆಟ್ ಹಾಗೂ ವೈಪರ್‌ ಹಿಡಿದು ನೀರು ಹೊರಗೆ ಚೆಲ್ಲಬೇಕಾಯಿತು.

ಮೋಹನ್‌ ಮಾರ್ಕೆಟ್‌ನಲ್ಲಿ ಗಟಾರುಗಳು ಉಕ್ಕಿ ಹರಿದು ಹರಳಯ್ಯ ವೃತ್ತ ಹಾಗೂ ರೋಟರಿ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ವಾಹನಗಳ ಓಡಾಟ ಹಾಗೂ ಪಾದಚಾರಿಗಳ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು.

ADVERTISEMENT

ಧಾರಾಕಾರವಾಗಿ ಸುರಿದ ಮಳೆಗೆ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಯಿತು. ನಗರದಲ್ಲಿ ಒಳ ಚರಂಡಿ ನಿರ್ಮಾಣ ಕಾಮಗಾರಿ ಕಾರಣ ಕೆಇಬಿ ಮುಂದಿನ ರಸ್ತೆ ಕೆಸರು ಮಯವಾಗಿತ್ತು.

ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಧಗೆ ಇತ್ತು. ಮಧ್ಯಾಹ್ನ ಮೋಡಗಳು ಆವರಿಸಿ ಸಂಜೆ ವೇಳೆಗೆ ಮಳೆ ಸುರಿಯಿತು. ಬೀದರ್ ತಾಲ್ಲೂಕಿನ ಕೊಳಾರ, ಆಣದೂರ, ಚೌಳಿ, ಅಮಲಾಪುರ ಹಾಗೂ ಚಿಟ್ಟಾದಲ್ಲಿ ಸಾಧಾರಣ ಮಳೆಯಾಗಿದೆ. ಹುಲಸೂರು ತಾಲ್ಲೂಕಿನಲ್ಲಿ ಕೆಲ ಕಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.