ಹುಮನಾಬಾದ್: ‘ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯಲ್ಲಿ ಗೊಂಡ ಎಂದು ನಮೂದಿಸಬೇಕು’ ಎಂದು ಮಾಜಿ ಸಚಿವ ಬಂಡೆಪ್ಪ ಖಾಶಂಪೂರ್ ತಿಳಿಸಿದರು.
ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಗೊಂಡ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು. ‘ನಾವೆಲ್ಲರೂ ಗೊಂಡ ಜಾತಿಯವರೇ ಆಗಿದ್ದೇವೆ. ಸಮೀಕ್ಷೆಯಲ್ಲಿ ಎಲ್ಲರೂ ಒಂದೇ ರೀತಿಯ ವಿವರ ನೀಡುವುದರ ಮೂಲಕ ಹಕ್ಕುಗಳನ್ನು ಬಲಪಡಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಅಮೃತರಾವ್ ಚಿಮಕೋಡೆ, ಮುರಳಿಧರರಾವ್ ಎಕಲಾರಕರ, ಎಂ.ಎಸ್.ಕಟಗೆ, ಶಿವರಾಜ ಚೀನಕೇರಾ, ನಾಗರಾಜ್ ದುಬಲಗುಂಡಿ, ಮಾಳಪ್ಪ ಅಡಸಾರೆ, ಪ್ರಕಾಶ್ ಸೋನಕೇರಾ, ಅಶೋಕ್ ಸೋಂಡೆ, ವಿನಾಯಕ್ ಹಂದಿಕೇರಾ, ಶಿವಕುಮಾರ್ ಬೇಳಕೇರಾ, ವಿಠಲ್ ಬೇನ್ ಚಿಂಚೋಳಿ, ಸಚ್ಚಿನ್ ಕಲ್ಲೂರ್, ನಾರಾಯಣ್ ರಾಂಪೂರೆ, ತಾನಾಜಿ ಪಾಟೀಲ, ಪವನ್ ಗೊಂಡ, ರಾಜು, ಗಣೇಶ, ಉತ್ತಮ್, ಅರುಣ್ , ವಿಠಲ್ , ರಮೇಶ, ಮಲ್ಲು ಮೋಳಕೇರಾ, ಪಂಡೀತ, ಖಂಡಪ್ಪ, ಪ್ರಕಾಶ್, ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.