ADVERTISEMENT

‘ಐಚ್ಛಿಕ ವಿಷಯಗಳಲ್ಲಿ ಎನ್‍ಸಿಸಿ ಅಳವಡಿಸಿ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 15:09 IST
Last Updated 13 ಜುಲೈ 2021, 15:09 IST
ಪಿ.ವಿಠ್ಠಲ ರೆಡ್ಡಿ
ಪಿ.ವಿಠ್ಠಲ ರೆಡ್ಡಿ   

ಬೀದರ್: ಗುಲಬರ್ಗಾ ವಿಶ್ವವಿದ್ಯಾಲಯವು ಕೂಡಲೇ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಎನ್‍ಸಿಸಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಬೇಕು ಎಂದು ಬೀದರ್ ಎನ್‍ಸಿಸಿ ಫೋರಂ ಅಧ್ಯಕ್ಷ ಮೇಜರ್ ಪಿ.ವಿಠ್ಠಲ ರೆಡ್ಡಿ ಒತ್ತಾಯಿಸಿದ್ದಾರೆ.

ದೇಶದ ಹಲವು ವಿಶ್ವವಿದ್ಯಾಲಯಗಳು ಎನ್‍ಸಿಸಿಯನ್ನು ಐಚ್ಛಿಕ ವಿಷಯಗಳಲ್ಲಿ ಸೇರಿಸಿವೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಐಚ್ಛಿಕ ವಿಷಯಗಳಲ್ಲಿ ಎನ್‍ಸಿಸಿ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.

1948ರ ಜುಲೈ 15ರಂದು ಆರಂಭವಾದ ಎನ್‍ಸಿಸಿ, ಯುವಕರಿಗೆ ಶಿಸ್ತುಬದ್ಧ ಜೀವನದ ಮಾರ್ಗದರ್ಶನ ನೀಡುತ್ತದೆ. ಅವರನ್ನು ಭಾರತೀಯ ಸೇನೆಗೆ ಸೇರಿಸಲು ಅಣಿಗೊಳಿಸುತ್ತಿದೆ. ಎನ್‍ಸಿಸಿಯನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.