ADVERTISEMENT

ಬೀದರ್ | ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿ: ಮಲ್ಲಿಕಾರ್ಜುನ ಗುಂಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:47 IST
Last Updated 16 ಸೆಪ್ಟೆಂಬರ್ 2025, 5:47 IST
<div class="paragraphs"><p>ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉದ್ಘಾಟಿಸಿದರು</p></div>

ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉದ್ಘಾಟಿಸಿದರು

   

ಬೀದರ್: ‘ಸರ್‌ಎಂ.ವಿಶ್ವೇಶ್ವರಯ್ಯನವರು ಕಂಡ ಕನಸು ನನಸಾಗಬೇಕಾದರೆ ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಈ ಕಾರ್ಯವನ್ನು ಇಂದಿನ ಎಂಜಿನಿಯರ್‌ಗಳು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪರಿಶ್ರಮದಿಂದ ಮಾಡಬೇಕು’ ಎಂದು ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ತಿಳಿಸಿದರು.

ನಗರದ ಡಾ.ಚನ್ನಬಸವ ಪಟ್ಟ ದ್ದೇವರು ರಂಗಮಂದಿರದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಐ)ನ ಜಿಲ್ಲಾ ಘಟಕದ ವತಿಯಿಂದ ಸರ್‌ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಪ್ರಯುಕ್ತ ನಡೆದ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿಶ್ವೇಶ್ವರಯ್ಯನವರು ಈ ದೇಶ ಕಂಡ ಅಪ್ರತಿಮ ದೂರದೃಷ್ಟಿಯುಳ್ಳ ರಾಷ್ಟ್ರ ನಿರ್ಮಾತೃ. ಗ್ರಾಮಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹಾಗೂ ಮೂಲಸೌಕರ್ಯ ಒದಗಿಸಿದಾಗ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂದು ತಿಳಿಸಿದ ಮಹಾನ್ ಚೇತನ. ಇವರನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಪ್ರಾಮಾಣಿಕತೆ ಮತ್ತು ವಿನೂತನ ಯೋಜನೆಗಳ ಬಗ್ಗೆ ಅರ್ಥೈಸಿಕೊಂಡು ಕಟ್ಟಡ ಕಟ್ಟುವುದರ ಜೊತೆಗೆ ಮನಸುಗಳನ್ನು ಕಟ್ಟುವ ಕಾರ್ಯ ಆಗಬೇಕಾಗಿದೆ’ ಎಂದರು.

‘ಎಂಜಿನಿಯರ್‌ಗಳ ಗುರಿ ಸ್ಪಷ್ಟವಾಗಿರಲಿ. ಕವಲು ದಾರಿಯ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ಎಂಜಿನಿಯರ್‌ಗಳು ಎಂದರೆ ಕೇವಲ ಕಟ್ಟಡದ ನಿರ್ಮಾರ್ತೃಗಳಲ್ಲ. ಗ್ರಾಮಗಳ ಉದ್ಧಾರವೇ ನಿಮ್ಮ ಗುರಿಯಾಗಿರಲಿ’ ಎಂದು ಹೇಳಿದರು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಐ)ನ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಮಣಗೆ ಮಾತನಾಡಿ,‘ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಸೇರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ಎಂಜಿನಿಯರ್ಸ್‌ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಒಂದು ಕಟ್ಟಡ ನಿರ್ಮಾಣದಲ್ಲಿ ಎಲ್ಲರ ಪಾತ್ರ ಬಹಳ ಮುಖ್ಯವಾಗಿದೆ’ ಎಂದರು.

ಎಸ್.ಆರ್.ಜೆ. ಪೀಟಿ ಸ್ಟೀಲ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕ ವಲ್ಲಭ ಪಾತುರಕರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಎಂಜಿನಿಯರ್‌ಗಳಾದ ವಿಲಾಸಕುಮಾರ ಮಾಶೆಟ್ಟಿ ಹಾಗೂ ಸುಧಾಕರ ಗರ್ಜೆ ಅವರನ್ನು ಸನ್ಮಾನಿಸ ಲಾಯಿತು.

ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಿ ಧನ್ನೂರೆ ಹಾಗೂ ಐಶ್ವರ್ಯ ವಿಶ್ವನಾಥ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಎಂಜಿನಿಯರ್‌ಗಳಾದ ಓಂಕಾರ ಪಾಟೀಲ, ಶಿವಕುಮಾರ ಪಾಟೀಲ, ಕಿರಣ ಗುರುಮೂರ್ತಿ, ಪ್ರಮುಖರಾದ ಶಿವಶರಣಪ್ಪ ವಾಲಿ, ಬಿ.ಎಸ್.ಕುದರೆ, ಅನೀಲಕುಮಾರ ಔರಾದೆ, ರಾಜಶೇಖರ ಕರ್ಪೂರ, ಶಾಂತಕುಮಾರ ಚಂದಾ, ದಿಲೀಪ್ ನಿಟ್ಟೂರೆ, ಅಂಬಾದಾಸ ಉಜನಿಕರ್, ರಾಜಶೇಖರ ಮಠ, ಅಮರನಾಥ ಕಣಜಿ, ಸುನೀಲ ಬಿರುಕರ್ ಉಪಸ್ಥಿತರಿದ್ದರು.

ಭಾವಚಿತ್ರದ ಮೆರವಣಿಗೆ ಜರುಗಿತು

ಕಟ್ಟಡ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮುಖ್ಯ

ಕಟ್ಟಡದ ಜೊತೆಗೆ ಮನಸುಗಳನ್ನೂ ಕಟ್ಟಿ

ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಿ

ಭಾವಚಿತ್ರದ ಮೆರವಣಿಗೆ
ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಅಲಂಕೃತ ಸಾರೋಟದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯು ಭಗತ್‌ ಸಿಂಗ್ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ರೋಟರಿ ವೃತ್ತದ ಮುಖಾಂತರ ರಂಗಮಂದಿರ ತಲುಪಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ, ಹಲಗೆಯ ಸದ್ದಿಗೆ ನೃತ್ಯ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.