ADVERTISEMENT

ಕಮಲನಗರ|ಹುತಾತ್ಮ ಯೋಧರ ಸ್ಮರಣಾರ್ಥ ಶಿಲಾ ಫಲಕ ಸ್ಥಾಪಿಸಿ: ನಾಗೇಶ ಸಂಗಮೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 13:22 IST
Last Updated 13 ಆಗಸ್ಟ್ 2023, 13:22 IST
ಕಮಲನಗರದಲ್ಲಿ ‘ನನ್ನ ಮಣ್ಣು -ನನ್ನ ದೇಶ’ ಕಾರ್ಯಕ್ರಮ ನಡೆಯಿತು
ಕಮಲನಗರದಲ್ಲಿ ‘ನನ್ನ ಮಣ್ಣು -ನನ್ನ ದೇಶ’ ಕಾರ್ಯಕ್ರಮ ನಡೆಯಿತು   

ಕಮಲನಗರ: ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ನನ್ನ ಮಣ್ಣು -ನನ್ನ ದೇಶ’ ಕಾರ್ಯಕ್ರಮವನ್ನು ಜಾನಪದ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಸಂಗಮೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ದೇಶದ ಸಂರಕ್ಷಣೆಗಾಗಿ ತಮ್ಮ ಜೀವವನ್ನು ಅರ್ಪಿಸಲು ಹಿಂಜರಿಯದೆ ಹುತಾತ್ಮರಾದವರ ಸ್ಮರಣಾರ್ಥವಾಗಿ ಯೋಧರ ಶಿಲಾ ಫಲಕಗಳನ್ನು ಸ್ಥಾಪಿಸಿ ದೇಶದ ಗೌರವ ಹೆಚ್ಚಿಸಬೇಕು. ಯುವಕರು ಇಂಥ ಕಾರ್ಯಕ್ಕೆ ಮುಂದಾಗಬೇಕು’ ಎಂದರು.

ಶಿಕ್ಷಕ ಉಮಕಾಂತ ಮಹಾಜನ ಮಾತನಾಡಿದರು.

ADVERTISEMENT

ಕಮಲನಗರ ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.