ಬೇಲೂರು (ಹುಲಸೂರ): ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಜೈಭವಾನಿ ಜಾತ್ರಾ ಮಹೋತ್ಸವದ ಅಂಗವಾಗಿ 15 ದಿನ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಅ.6 ರಂದು ನಡೆದ ಕಾರ್ಯಕ್ರಮದಲ್ಲಿ ಜ್ಯೂನಿಯರ್ ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ಅಂಬರೀಷ, ರವಿಚಂದ್ರನ್, ಗುರುಕಿರಣ್ ಅವರು ಕಾರ್ಯಕ್ರಮ ನೀಡಿದರು. ನಂತರ ಸಾನ್ವಿ ಮೆಲೋಡಿಸ್ ಅವರು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.
ಜೈ ಭವಾನಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟೆ, ವೀರಶೆಟ್ಟಿ ಮಲಶೆಟ್ಟಿ, ರಾಜಕುಮಾರ ಹಲ್ಲಿಂಗೆ, ರಾಮಣ್ಣ ಹುಲಸೂರೆ, ರಾಮು ಸಾಗಾವೆ, ವಿಜಯಕುಮಾರ ಪಾಟೀಲ, ಪ್ರಶಾಂತ ಚಿಲ್ಲಾಬಟೆ, ಶಾಲಿವಾಹನ ಸತಣೆ, ಬಾಲಾಜಿ ಪಾಟೀಲ, ಸಂತೋಷ ಸೆಡೋಳೆ, ಹುಲ್ಲೆಪ್ಪ ವಗ್ಗೆ ಹಾಗೂ ಶರಣಪ್ಪ ಜೂಲ್ಪೆ ಇದ್ದರು.
ಬಸವರಾಜ ಗುಂಗೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.