ADVERTISEMENT

ಕನ್ನಡಿಗರ ಮಧ್ಯೆ ಭೇದ ಸಲ್ಲದು: ಶಿವಾಜಿರಾವ ಚಿಟಗಿರೆ

ಕಸಾಪ ಚುನಾವಣೆ ಸಭೆಯಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:56 IST
Last Updated 19 ಏಪ್ರಿಲ್ 2021, 4:56 IST
ಔರಾದ್ ಪಟ್ಟಣದಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಭೆಯಲ್ಲಿ ರಾಜಕುಮಾರ ಹೆಬ್ಬಾಳೆ, ಚಂದ್ರಕಾಂತ ನಿರ್ಮಳೆ, ಸೂರ್ಯಕಾಂತ ಸಿಂಗೆ, ಗುರುನಾಥ ದೇಶಮುಖ ಇದ್ದರು
ಔರಾದ್ ಪಟ್ಟಣದಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಭೆಯಲ್ಲಿ ರಾಜಕುಮಾರ ಹೆಬ್ಬಾಳೆ, ಚಂದ್ರಕಾಂತ ನಿರ್ಮಳೆ, ಸೂರ್ಯಕಾಂತ ಸಿಂಗೆ, ಗುರುನಾಥ ದೇಶಮುಖ ಇದ್ದರು   

ಔರಾದ್: ‘ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ. ಆದರೆ ಇವರು ಮರಾಠಿಗರು ಅವರು ತೆಲಂಗಾಣದವರು ಎಂದು ಭೇದ ಭಾವ ಮಾಡುವುದು ಸರಿಯಲ್ಲ’ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಶಿವಾಜಿರಾವ ಚಿಟಗಿರೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚುನಾವಣೆ ಅಂಗವಾಗಿ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಶಿವಾಜಿರಾವ ಪಾಟೀಲ ಮಾತನಾಡಿ, ‘ನನ್ನ ಮಾತೃ ಭಾಷೆ ಮಾರಾಠಿ. ಆದರೆ ನಾನು ಕನ್ನಡ ಚೆನ್ನಾಗಿ ಬಲ್ಲೆ. ನನ್ನ ಗೆಳೆಯರು, ಹಿತೈಸಿಗಳೆಲ್ಲ ಕನ್ನಡಿಗರೇ. ಈ ಹಿಂದೆ ನಡೆದ ಬಹುತೇಕ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡಿಗರ ಜತೆ ಕೈಜೋ ಡಿಸಿ ಕೆಲಸ ಮಾಡಿದ್ದೇನೆ’ ಎಂದರು.

ADVERTISEMENT

ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ‘ನಮ್ಮಲ್ಲಿ ಯಾವುದೇ ಭಾಷೆ, ಜಾತಿ ಭೇದ ಇರುವುದಿಲ್ಲ. ಜಾನಪದ ಪರಿಷತ್ ಮೂಲಕ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಹಿಂದೆ ನಡೆದಂತೆ ಮುಂದೆ ನಡೆಯಲು ಅವಕಾಶ ಕೊಡುವುದಿಲ್ಲ’ ಎಂdಉ ಹೇಳಿದರು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಮಾತನಾಡಿ, ‘ಈ ಚುನಾವಣೆಯಲ್ಲಿ ಕನ್ನಡ ಭವನ ಕಟ್ಟುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ವಿಷಯ ಚುವಾವಣೆ ಅಸ್ತ್ರವಾಗಿಯೂ ಬಳಸಿಕೊಳ್ಳ ಲಾಗುತ್ತಿದೆ. ಆದರೆ ವಾಸ್ತವಿಕವಾಗಿ ಈಗ ಮಂಜೂರಿ ಆಗಿರುವುದು ಜಿಲ್ಲಾಡಳಿತದ ಕನ್ನಡ ಭವನ. ಜಿಲ್ಲಾಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಹೀಗಾದರೆ ಸಾಹಿತ್ಯ ಪರಿತ್ತಿನ ಭವನ ಆಗಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಶಿಕ್ಷಕ ಸೂರ್ಯಕಾಂತ ಸಿಂಗೆ, ಶಾಮಸುಂದರ ಖಾನಾಪುರ, ಧುರೀಣ ಪ್ರಕಾಶ ಘುಳೆ, ನಾಗನಾಥ ಸಾಡಂಗಲೆ, ಚೇತನ ಕಪ್ಪೆಕೇರಿ, ಗುರುನಾಥ ದೇಶಮುಖ, ಮಲ್ಲಿಕಾರ್ಜುನ ಹಿಪ್ಪಳಗಾವೆ. ಶಿವರಾಜ ಶೆಟಕಾರ, ಸಂಜುಕುಮಾರ ಜುಮ್ಮಾ, ಬಸವರಾಜ ಶೆಟಕಾರ, ಅನೀಲ ಜಿರೋಬೆ ಮತ್ತಿತರರು ಇದ್ದರು. ಇದೇ ವೇಳೆ ಕಸಾಪ ಜಿಲ್ಲಾ ಅಧ್ಯಕ್ಷ ಚುನಾವಣೆ ಪ್ರಚಾರ ಕಚೇರಿ ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.