ADVERTISEMENT

ಬೀದರ್‌: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 5:56 IST
Last Updated 1 ಡಿಸೆಂಬರ್ 2020, 5:56 IST

ಬೀದರ್‌: ನಗರದ ಜನವಾಡ ವಾಟರ್ ಟ್ಯಾಂಕ್ ಸಮೀಪ ಬಸ್‌ ತಂಗುದಾಣದ ಎದುರು ಸೋಮವಾರ ರಾತ್ರಿ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ಕೊಲೆಯಾದವರನ್ನು ಔರಾದ್‌ ತಾಲ್ಲೂಕಿನ ಚಿಂತಾಕಿಯ ಸೆಂಟ್ರಿಂಗ್‌ ಕೆಲಸಗಾರ ಎಲ್ಸನ್ ಮಾದಪ್ಪ(25) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ 6 ಗಂಟೆಗೆ ತೆಲಂಗಾಣದ ಸಂಗಾರೆಡ್ಡಿಯಿಂದ ಹೊರಟು ರಾತ್ರಿ ಬೀದರ್‌ಗೆ ಬಂದಿದ್ದರು. ಜನವಾಡ ರಸ್ತೆಯಲ್ಲಿರುವ ಬಸ್‌ ತಂದುದಾಣದ ಬಳಿ ಊರಿಗೆ ಹೋಗಲು ಔರಾದ್‌ ಕಡೆಗೆ ಹೋಗುವ ಬಸ್‌ಗಾಗಿ ಕಾದು ನಿಂತಿದ್ದರು ಎನ್ನಲಾಗಿದೆ. ಅಪರಿಚಿತರು ಕಲ್ಲು ಎತ್ತು ಹಾಕಿಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ADVERTISEMENT

ನ್ಯೂಟೌನ್‌ ಪಿಎಸ್‌ಐ ಸಂತೋಷ ಎಲ್‌.ಟಿ. ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.