ADVERTISEMENT

ಲಾರಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮೇ 2021, 4:13 IST
Last Updated 24 ಮೇ 2021, 4:13 IST

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದ ನಾಸೀರ್ ಮೋಮಿನ್ ಎಂಬುವರ ಲಾರಿ ಕಳವು ಮಾಡಿದ್ದ ಜೀವನ್ ಎಂಬಾತನನ್ನು ಪೊಲೀಸರು ಪತ್ತೆ ಹಚ್ಚಿ ಶನಿವಾರ ಬಂಧಿಸಿದ್ದಾರೆ.

ಈತ ಮಹಾರಾಷ್ಟ್ರದ ಉಮರ್ಗಾ ದಲ್ಲಿ ಲಾರಿ ಹತ್ತಿ ಕ್ಲೀನರ್ ಕೆಲಸ ಮಾಡು ತ್ತೇನೆ ಎಂದು ಚಾಲನನ್ನು ಒಪ್ಪಿಸಿದ್ದಾನೆ. ಲಾರಿ ಅಲ್ಲಿಂದ ರಾಜೇಶ್ವರಕ್ಕೆ ಬಂದಾಗ ಚಾಲಕ ಊಟಕ್ಕೆ ಹೋಗಿದ್ದ ಎನ್ನಲಾಗಿದೆ. ಆಗ ಜೀವನ್ ಈರುಳ್ಳಿ ತುಂಬಿದ ಲಾರಿಯನ್ನು ಯಾರಿಗೂ ಹೇಳದೆ ಕೇಳದೆ ತೆಗೆದುಕೊಂಡು ಹೋಗಿದ್ದನು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಠಾಣೆ ಸಬ್ ಇನ್‌ಸ್ಪೆಕ್ಟರ್ ವಸೀಮ್ ಪಟೇಲ್ ಹಾಗೂ ಸಿಪಿಐ ಮಹೇಶಗೌಡ ಪಾಟೀಲ ಅವರು ಹುಡುಕಾಟ ನಡೆಸಿ ಲಾರಿ ಹಾಗೂ ಆರೋಪಿಯನ್ನು ಬಂಧಿಸಿದ್ದಾರೆ. ಲಾರಿ ಆಳಂದ ತಾಲ್ಲೂಕಿನ ರುದನೂರ ಬಳಿ ನಿಲ್ಲಿಸಿದ್ದಾಗ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.