ರೈಲು
– ಪ್ರಜಾವಾಣಿ ಚಿತ್ರ
ಬೀದರ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ನಿಮಿತ್ತ ಭಕ್ತರಿಗೆ ಬೀದರ್ ಲೋಕಸಭಾ ಕ್ಷೇತ್ರದಿಂದ ಪ್ರಯಾಗರಾಜ್ಗೆ ತೆರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಫೆ.14ರಂದು ರೈಲು ಸಂಖ್ಯೆ 07111, ಫೆ.16ರಂದು ರೈಲು ಸಂಖ್ಯೆ 07112 ಕ್ರಮವಾಗಿ ಬೀದರ್-ದಾನಾಪುರ, ಬೀದರ್-ದಾನಾಪುರ-ಚರ್ಲಪಲ್ಲಿಗೆ ತೆರಳಲಿವೆ ಎಂದು ಸಿಕಿಂದ್ರಾಬಾದ್ನ ದಕ್ಷಿಣ ಮಧ್ಯೆ ರೈಲ್ವೆ ಪ್ರಕಟಣೆ ತಿಳಿಸಿದೆ.
ವಿಶೇಷ ರೈಲು ಓಡಿಸುವ ಸಂಬಂಧ ಸಂಸದ ಸಾಗರ್ ಖಂಡ್ರೆ ಜ.27ರಂದು ಸಿಕಿಂದ್ರಾಬಾದ್ನ ದಕ್ಷಿಣ ಮಧ್ಯೆ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.