ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಲಗಿ, ವಿಠ್ಠಲಪುರ ಗ್ರಾಮದ ಯುವಕರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಇಲ್ಲಿಯ ರಾಂಪುರೆ ಕಾಲೊನಿಯಲ್ಲಿರುವ ಮಾಜಿ ಶಾಸಕ ಅಶೋಕ ಖೇಣಿ ಅವರ ಗೃಹ ಕಚೇರಿಯಲ್ಲಿ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಯುವಕರು ಪಕ್ಷ ಸೇರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂದು ಅಶೋಕ ಖೇಣಿ ತಿಳಿಸಿದರು.
ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ್ ಕಮಠಾಣ, ಪ್ರಮುಖರಾದ ಸಮಿಯೊದ್ದಿನ್, ಸೂರ್ಯಕಾಂತ ಸಿಂದೋಲ್, ಜಯಪ್ರಕಾಶ, ಮಧುಕುಮಾರ, ಮಧುಕರ ಸಾಬ, ನಾಗಪ್ಪ ಮೋರೆ, ಸಾಗರ ಮೋರೆ, ಹರೀಶ್ ಬೇಂದ್ರೆ, ಅಮಿತ್ ಮಾಲೆ, ಚಂದ್ರಕಾಂತ, ಜಗನ್ನಾಥ, ನೀಲಕಂಠ, ಶಾಮರಾವ್, ಯಲ್ಲಾಲಿಂಗ್, ಅಶೋಕ್, ಪಂಢರಿ, ದಿಲೀಪ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.