ಬೀದರ್: ಇಲ್ಲಿಯ ಮಾರ್ಕೆಟ್ ಠಾಣೆಯ ಪೊಲೀಸರು ಇಬ್ಬರು ಕಳ್ಳತನದ ಆರೋಪಿಗಳಿಂದ ₹ 6.70 ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳ ಡಿಸ್ಪ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಗಂಗಾಖೇಡ ತಾಲ್ಲೂಕಿನಲ್ಲಿ ಕಳ್ಳತನದ ಇಬ್ಬರು ಆರೋಪಿಗಳನ್ನು ಜನವರಿ 8ರಂದು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆರೋಪಿಗಳಿಂದ ₹ 6.70 ಲಕ್ಷ ಮೌಲ್ಯದ ಮೊಬೈಲ್ ಫೋನ್ ಡಿಸ್ಪ್ಲೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಇನ್ನೊಬ್ಬ ಆರೋಪಿ ಶೋಧ ಕಾರ್ಯ ನಡೆಸಿದ್ದಾರೆ.
2021ರ ಡಿಸೆಂಬರ್ 26ರ ರಾತ್ರಿ ನಗರದ ಮಹಾವೀರ ವೃತ್ತ ಸಮೀಪದ ಧನಲಕ್ಷ್ಮಿ ಮೊಬೈಲ್ ಅಂಗಡಿಯಲ್ಲಿನ ₹ 15.98 ಲಕ್ಷ ಮೌಲ್ಯದ ಮೊಬೈಲ್ ಫೋನ್ ಡಿಪ್ಸ್ಲೆಗಳು ಹಾಗೂ ₹ 3 ಲಕ್ಷ ನಗದು ಸೇರಿ ಒಟ್ಟು ₹ 18.98 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿದ್ದವು. ರಾಜಸ್ಥಾನದ ಕಲಾರಾಮ ಚೌಗಾರಾಮ ಚೌಧರಿ ಅವರು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.