ADVERTISEMENT

ಮೊಬೈಲ್ ಅಂಗಡಿಗೆ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 14:50 IST
Last Updated 1 ನವೆಂಬರ್ 2021, 14:50 IST
ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಸುಟ್ಟು ಹೋಗಿರುವ ಬೀದರ್‌ನ ಕಲ್ಪನಾ ಎಸ್ಟೇಟ್‍ನಲ್ಲಿಯ ‘ಶ್ರೀ ಸಾಯಿ ಗುರು ಸೆಲ್’ ಮೊಬೈಲ್ ಅಂಗಡಿಯ ವಿವಿಧ ಕಂಪನಿಯ ಮೊಬೈಲ್‍ಗಳು
ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಸುಟ್ಟು ಹೋಗಿರುವ ಬೀದರ್‌ನ ಕಲ್ಪನಾ ಎಸ್ಟೇಟ್‍ನಲ್ಲಿಯ ‘ಶ್ರೀ ಸಾಯಿ ಗುರು ಸೆಲ್’ ಮೊಬೈಲ್ ಅಂಗಡಿಯ ವಿವಿಧ ಕಂಪನಿಯ ಮೊಬೈಲ್‍ಗಳು   

ಬೀದರ್: ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಇಲ್ಲಿಯ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿ ಇರುವ ಎಕ್ಸಿಸ್ ಬ್ಯಾಂಕ್ ಎದುರಿನ ಕಲ್ಪನಾ ಎಸ್ಟೇಟ್‍ನಲ್ಲಿಯ ‘ಶ್ರೀ ಸಾಯಿ ಗುರು ಸೆಲ್’ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.

ಭಾನುವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಅವಘಡದಿಂದ ಸುಮಾರು ₹ 21 ಲಕ್ಷ ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕ ಸಿದ್ರಾಮ ನಾಗಪ್ಪ ಬಿರಾದಾರ ಗಾಂಧಿಗಂಜ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ವಿವಿಧ ಕಂಪನಿಗಳ ಮೊಬೈಲ್‍ಗಳು, ಸಿಸಿ ಟಿವಿ ಕ್ಯಾಮೆರಾ, ಮಾನಿಟರ್, ಝೆರಾಕ್ಸ್ ಮಷೀನ್, ಇನ್‍ವರ್ಟರ್, ಕಂಪ್ಯೂಟರ್, ಫರ್ನಿಚರ್ ಮೊದಲಾದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.