ಬೀದರ್: ಸಂಸದ ಭಗವಂತ ಖೂಬಾ ಅವರ 54ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಘಟಕದ ವತಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಂಗಳವಾರ ಕಾರ್ಮಿಕರಿಗೆ ಹಣ್ಣು, ಕುಡಿಯುವ ನೀರಿನ ಬಾಟಲಿ ಹಾಗೂ ಮಾಸ್ಕ್ ವಿತರಿಸಲಾಯಿತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಮುಖಂಡರಾದ ರೌಫೊದ್ದಿನ್ ಕಚೇರಿವಾಲೆ, ಅನಿಲ್ ರಾಜಗೀರಾ, ಶರಣು ಬಿರಾದಾರ, ನರೇಶ ಗೌಳಿ, ದೇವೇಂದ್ರ ಎಮ್ಮೇಕರ್, ಸಂತೋಷ ಪಾಟೀಲ, ದೀಪಕ್ ಚಿದ್ರಿ, ಬಸವರಾಜ ಮಲ್ಕಾಪುರೆ, ಗೋರಕ ಗೌಳಿ, ಗೋಪಾಲ್ ಕಕ್ಕಾಡ್ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.