ಬೀದರ್: ತಾಲ್ಲೂಕಿನ ರೇಕುಳಗಿ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ನರೇಗಾ ದಿವಸ್ ಆಚರಿಸಲಾಯಿತು.
ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಲು ಕೂಲಿ ಕಾರ್ಮಿಕರಿಗೆ ಅವಕಾಶ ಇರುವ ಕುರಿತು ಸುಜಾತಾ ನಂದಿನಿ ಮಾಹಿತಿ ನೀಡಿದರು.
ಉನ್ನತಿ, ಜಲ ಸಂಜೀವಿನಿ, ಇ-ಶ್ರಮ, ಲೇಬರ್ ಕಾರ್ಡ್ ಕುರಿತು ತಾಂತ್ರಿಕ ಸಂಯೋಜಕ ಅಮರ್ ಬಿರಾದರ ಅವರು ತಿಳಿಸಿದರು.
ನರೇಗಾ ಎಂಜಿನಿಯರ್ ನಸಿಮೊದ್ದೀನ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.