ಬೀದರ್: ಬಹುಭಾಷಿಕರನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರವು ಬೇರೆ ರಾಜ್ಯದ ಅಪರಿಚಿತ ವ್ಯಕ್ತಿಗೂ ಮಣೆ ಹಾಕಿದ ಇತಿಹಾಸವನ್ನು ಹೊಂದಿದೆ! ಉತ್ತರ ಪ್ರದೇಶದ ಶೌಕತ್ಉಲ್ಲಾ ಶಾಹ ಅನ್ಸಾರಿ ಅವರು ಕಾಂಗ್ರೆಸ್ ಗಾಳಿಯಲ್ಲಿ ಗೆಲುವು ಸಾಧಿಸಿದ್ದರು.
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ಘೋಷಣೆಯಾದಾಗ (1952) ಈ ಭಾಗದಿಂದ ಯಾರನ್ನು ಚುನಾವಣಾ ಕಣಕ್ಕೆ ಇಳಿಸಬೇಕು ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಜವಾಹರಲಾಲ್ ನೆಹರೂ ಅವರು ಉತ್ತರಪ್ರದೇಶದ ಅನ್ಸಾರಿಯನ್ನು ಕಳುಹಿಸಿಕೊಟ್ಟಿದ್ದರು. ಅನ್ಸಾರಿ ಯಾರು? ಎನ್ನುವುದು ಕ್ಷೇತ್ರದ ಮತದಾರರಿಗೆ ಗೊತ್ತೇ ಇರ
ಲಿಲ್ಲ. ಆದರೆ, ಕಾಂಗ್ರೆಸ್ ನಾಯಕರ ಪ್ರಭಾವದಿಂದ 53,000 ಮತಗಳಿಂದ ಅವರು ಗೆದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.