ADVERTISEMENT

ವಿಶ್ವ ಶುಶ್ರೂಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 14:50 IST
Last Updated 13 ಮೇ 2019, 14:50 IST
ಬೀದರ್‌ನಲ್ಲಿ ಸೋಮವಾರ 13 ಶುಶ್ರೂಷಕರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಸೋಮವಾರ 13 ಶುಶ್ರೂಷಕರನ್ನು ಸನ್ಮಾನಿಸಲಾಯಿತು   

ಬೀದರ್‌: ಕರ್ನಾಟಕ ರಾಜ್ಯ ಶುಶ್ರೂಷಕರ ಸಂಘದ ಜಿಲ್ಲಾ ಘಟಕದ ಹಾಗೂ ಬ್ರಿಮ್ಸ್ ಶುಶ್ರೂಷಕರ ಸಂಘದ ಆಶ್ರಯದಲ್ಲಿ
ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು.

ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ಸುನೀಲ ತಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಅತಿಥಿಯಾಗಿ ವೈದ್ಯಕೀಯ ಅಧೀಕ್ಷಕ ಡಾ.ರಾಜಶೇಖರ ಪಾಟೀಲ ಪಾಲ್ಗೊಂಡಿದ್ದರು. ಪ್ರಭಾರಿ ಶುಶ್ರೂಷಕ ಅಧೀಕ್ಷಕಿ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಶುಶ್ರೂಷಕರದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮಾಳಗೆ ಇದ್ದರು.

ಕಾರ್ಯಕ್ರಮದಲ್ಲಿ ಪದ್ಮಾ.ಎನ್., ಮಾರ್ಗರೇಟ್, ಜಿ.ಕಾಂತಾ, ಚಂದ್ರಕಲಾ ಎ., ವಿಜಯಲಕ್ಷ್ಮಿ, ರೇಣುಕಾ, ನಾಗಮ್ಮ, ಸಂಗೀತಾ ಪಿ., ರಾಜಕುಮಾರ ಕೆ., ಬಸವರಾಜ, ಗೋರಖನಾಥ ಮಾಲೆ, ಕಿರಣ ಕುಮಾರ ಹಾಗೂ ಬಾಹುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಬಸವಸುಮಾ ಸ್ವಾಗತಿಸಿದರು. ಪ್ರಕಾಶ ಬಿ.ಎಂ., ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.