ADVERTISEMENT

ವೃದ್ಧೆ ಆಕಸ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 22 ಮೇ 2019, 14:48 IST
Last Updated 22 ಮೇ 2019, 14:48 IST
ಯಮುನಾಬಾಯಿ ಬಾಬುರಾವ ಮುರ್ಕೆ
ಯಮುನಾಬಾಯಿ ಬಾಬುರಾವ ಮುರ್ಕೆ   

ಕಮಲನಗರ (ಬೀದರ್‌ ಜಿಲ್ಲೆ): ತಾಲ್ಲೂಕಿನ ಬಸನಾಳ ಗ್ರಾಮದಲ್ಲಿ ಬುಧವಾರ ವೃದ್ಧೆಯೊಬ್ಬರು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.

ಯಮುನಾಬಾಯಿ ಬಾಬುರಾವ್ ಮುರ್ಕೆ(60) ಮೃತಪಟ್ಟವರು. ಯಮುನಾಬಾಯಿ ಅವರು ಗ್ರಾಮದ ಪರಿಚಿತರೊಬ್ಬರ ಮನೆಯಲ್ಲಿ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ಊಟ ಮಾಡಿ ಮಜ್ಜಿಗೆ ಸೇವಿಸುತ್ತಿದ್ದರು. ಅಷ್ಟರಲ್ಲೇ ತಲೆಸುತ್ತಿ ಕುಸಿದು ಬಿದ್ದರು. ಕಮಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರುವಷ್ಟರಲ್ಲಿ ಕೊನೆಯುಸಿರೆಳೆದರು.

‘ಕಮಲನಗರದಲ್ಲಿ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಬಿಸಿಲಿನ ತಾಪ ತಾಳಲಾಗದೆ ನನ್ನ ತಾಯಿ ಸಾವಿಗೀಡಾಗಿದ್ದಾರೆ’ ಎಂದು ಯಮುನಾಬಾಯಿ ಪುತ್ರ ಸತೀಶ ಮುರ್ಕೆ ಹೇಳಿದ್ದಾರೆ.

ADVERTISEMENT

‘ಬೇಸಿಗೆಯಲ್ಲಿ ದೇಹದಿಂದ ಹೆಚ್ಚು ಬೆವರು ಸುರಿದಿದ್ದರೆ ನಿರ್ಜಲೀಕರಣದಿಂದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಆದರೆ, ಯಮುನಾಬಾಯಿ ದೇಹದಲ್ಲಿ ನಿರ್ಜಲೀಕರಣ ಕಂಡು ಬಂದಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಕಮಲನಗರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ ಬಾಚಪಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.