ಚಿಟಗುಪ್ಪ: ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಆರ್ಯ ಸಮಾಜದ ಕರ್ನಾಟಕ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ಅಷ್ಟೀಕರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಿರ್ಣಾ ಗ್ರಾಮದ ಆರ್ಯ ಸಮಾಜ ಮಂದಿರದಲ್ಲಿ ನಡೆದ ವಾಣಿಜ್ಯ ಮಳಿಗೆ, ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮದಲ್ಲಿ ಆರ್ಯ ಸಮಾಜದ ಸಂಘಟನೆಯ ಜತೆಗೆ ಮಂದಿರದಲ್ಲಿ ನೂತನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿ’ ಎಂದು ಆರ್ಯ ಸಮಾಜ ಪ್ರಧಾನ ಶಿವಶರಣಪ್ಪ ವಾಲಿ ಹೇಳಿದರು.
ಆರ್ಯ ಸಮಾಜ ಉಪಾಧ್ಯಕ್ಷ ನಾರಾಯಣ ಚಿದ್ರಿ, ದಶರಥ ಆರ್ಯ, ಆನಂದ ತೆಲಂಗ, ಸದಾನಂದ ಖಮಿತ್ಕರ್, ಮಲ್ಲಪ್ಪ ಗೊಲ್ಲರ್, ಭಿಮರಡ್ಡಿ ಆಣದೂರ್, ಮಲ್ಲಿಕಾರ್ಜುನ, ಬಾಬುರಾವ್ ಬನ್ನಳ್ಳಿ ಹಾಗೂ ರಾಜು ಮೆತ್ರಸ್ಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.