ADVERTISEMENT

ಕಮಲನಗರ: ಬಿಸಿಲಿನ ಬೇಗೆಗೆ ತಂಪೆರೆದ ಮಳೆರಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:40 IST
Last Updated 2 ಜೂನ್ 2024, 15:40 IST
ಕಮಲನಗರ ತಾಲ್ಲೂಕಿನಲ್ಲಿ ಭಾನುವಾರ ಮಳೆ ಸುರಿಯಿತು
ಕಮಲನಗರ ತಾಲ್ಲೂಕಿನಲ್ಲಿ ಭಾನುವಾರ ಮಳೆ ಸುರಿಯಿತು   

ಕಮಲನಗರ: ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ 3.15ರಿಂದ ಸಂಜೆ 4.45ರವರೆಗೆ ಗುಡುಗು ಸಹಿತ ಮಳೆಯಾಗಿದೆ. ಮಳೆ ಜೊತೆಗೆ ವಿಪರೀತ ಗಾಳಿಯೂ ಬೀಸಿತು. ಬಿಸಿಲಿನ ಬೇಗೆಯ ವಾತಾವರಣ ಮಳೆಯಿಂದ ತಂಪಾಯಿತು.

ಕಮಲನಗರ, ಮದನೂರ, ಸೋನಾಳ, ಖತಗಾಂವ್ ಸೇರಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯಿತು. ಮೋಡ ಕವಿದ ವಾತಾವರಣವೂ ಇತ್ತು.

ಸಾಧಾರಣ ಮಳೆಯಾಗುತ್ತಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಮಲನಗರ ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.