ADVERTISEMENT

ವ್ಯಾಪಾರಿಗಳ ಸಮಸ್ಯೆ ಬಗೆಹರಿಸುವೆ: ಕೇಂದ್ರ ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 15:00 IST
Last Updated 17 ಆಗಸ್ಟ್ 2021, 15:00 IST

ಬೀದರ್: ರಸಗೊಬ್ಬರ ಹಾಗೂ ರಾಸಾಯನಿಕ ಅಂಗಡಿಗಳ ಮಾಲೀಕರ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ ನೀಡಿದರು.

ಇಲ್ಲಿಯ ಗಾಂಧಿಗಂಜ್‍ನ ರಾಸಾಯನಿಕ ಹಾಗೂ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಬೀದರ್ ತಾಲ್ಲೂಕು ಆಗ್ರೊ ಇನ್‍ಪುಟ್ ಡೀಲರ್ಸ್ ಅಸೋಸಿಯೇಷನ್‍ನ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದರು.

ADVERTISEMENT

ಅಸೋಸಿಯೇಷನ್ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಬೀದರ್ ಟ್ರಾನ್ಸ್‍ಪೋರ್ಟ್ ಮಾಲೀಕರ ಸಂಘದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಾಸಾಯನಿಕ ಮತ್ತು ರಸಗೊಬ್ಬರ ಅಂಗಡಿಗಳ ಮಾಲೀಕರಾದ ಕಂಟೆಪ್ಪ ಪಾಟೀಲ, ಮಿಲನ್ ಘೋರ್ಪಡೆ, ಸಂಜುಕುಮಾರ ಜಂಪಾ, ಸೂರ್ಯಕಾಂತ ಚುಳಕೆ, ಬಾಬುರಾವ್ ಬಿರಾದಾರ, ಸಿದ್ದು ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಪ್ರದೀಪ್ ಪಾಟೀಲ, ವಿದ್ಯಾನಂದ ಸ್ವಾಮಿ, ವೀರೇಂದ್ರ ಚುಳಕೆ, ರಾಜಕುಮಾರ ಗುನ್ನಳ್ಳಿ ಇದ್ದರು. ಸೋಮನಾಥ ಗಂಗಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.