ADVERTISEMENT

ನಾರಾಯಣರಾವ್ ಕಾರ್ಯದಿಂದ ಬಲ: ಅಹ್ಮದ್ ಖಾನ್ ಅಭಿಪ್ರಾಯ

ಬಸವಕಲ್ಯಾಣದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 6:46 IST
Last Updated 15 ಏಪ್ರಿಲ್ 2021, 6:46 IST
ಬಸವಕಲ್ಯಾಣದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಎಐಎಂಐಎಂ ಮುಖಂಡ ರಾಮ ಗೋಡಬೋಲೆ, ಬಸವರಾಜ ಅವರು ಶಾಸಕ ರಾಜಶೇಖರ ಪಾಟೀಲ, ಜಮೀರ್ ಅಹ್ಮದ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು
ಬಸವಕಲ್ಯಾಣದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಎಐಎಂಐಎಂ ಮುಖಂಡ ರಾಮ ಗೋಡಬೋಲೆ, ಬಸವರಾಜ ಅವರು ಶಾಸಕ ರಾಜಶೇಖರ ಪಾಟೀಲ, ಜಮೀರ್ ಅಹ್ಮದ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು   

ಬಸವಕಲ್ಯಾಣ: ‘ಶಾಸಕರಾಗಿದ್ದ ಬಿ.ನಾರಾಯಣರಾವ್ ಅವರು 30 ತಿಂಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಬಲ ತಂದಿವೆ. ಇದರಿಂದ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಗೆಲುವು ನಿಶ್ಚಿತವಾಗಿದೆ’ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಸ್ಲಿಂ ಹಾಗೂ ಇತರೆ ಸಮುದಾಯದವರು ಕಾಂಗ್ರೆಸ್ ಬೆಂಬಲಿ ಸುತ್ತಿದ್ದಾರೆ. ಎಐಎಂಐಎಂನ ನಗರಸಭೆ ಸದಸ್ಯರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಸ್ಲಿಂ ಲೀಗ್ ಅಭ್ಯರ್ಥಿಯೂ ಬೆಂಬಲಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಗೆಲುವು ಸುಲಭ ಆಗಲಿದೆ. ಕುಮಾರಸ್ವಾಮಿ ಅವರು ₹10 ಕೋಟಿ ಪಡೆದು ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿರುವ ಬಗ್ಗೆ ಅವರು ಎಲ್ಲಿ ಕರೆದರೂ ಚರ್ಚೆಗೆ ಹೋಗಲು ಸಿದ್ಧನಿದ್ದೇನೆ’ ಎಂದರು.

ಎಐಎಂಐಎಂ ಮುಖಂಡರಾದ ರಾಮ ಗೋಡಬೋಲೆ, ಬಸವರಾಜ ಪಕ್ಷಕ್ಕೆ ಸೇರ್ಪಡೆಗೊಂಡರು.

ADVERTISEMENT

ಶಾಸಕರಾದ ರಾಜಶೇಖರ ಪಾಟೀಲ, ರಿಜ್ವಾನ್ ಇರ್ಷಾದ್, ಪ್ರಿಯಾಂಕ್ ಖರ್ಗೆ, ವಿಜಯಸಿಂಗ್, ಪಕ್ಷದ ಯುವ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಹ್ಯಾರೀಸ್‌ ನಲಪಾಡ್, ಆನಂದ ದೇವಪ್ಪ, ದತ್ತು ಮೂಲಗೆ, ಗೌತಮ ನಾರಾಯಣರಾವ್, ಚಂದ್ರಕಾಂತ ಮೇತ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.