ಹುಮನಾಬಾದ್: ‘ಕ್ಷಯ ರೋಗದ ಕುರಿತು ಜನರಲ್ಲಿ ಜಾಗೃತಿ ಅಗತ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ್ತಿ ಹಂಸವೇಣಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು,‘ಈ ರೋಗದ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ’ ಎಂದರು.
ಡಾ. ಸ್ವಾತಿ, ಡಾ.ಸತೀಶ ಹಾಗೂ ಡಾ.ಶರಣಬಸಯ್ಯ ಸ್ವಾಮಿ ಅವರು ಪ್ರಯೋಗಾಲಯದ ಪರೀಕ್ಷಾ ವಿಧಾನಗಳನ್ನು ಪರಿಶೀಲಿಸಿದರು.
ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿದರು.
ಶಿವಕುಮಾರ ಕಂಪ್ಲಿ, ಈಶ್ವರ ತಡೋಳಾ, ಸುಕೇಶಿನಿ, ಖಾಜಾ, ಮಹಾನಂದಾ, ಅವಿನಾಶ, ಅಂಬಿಕಾ, ತೌಸೀಫ್ ಸೇರಿದಂತೆ ಹಲವರು
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.