ADVERTISEMENT

ಬೀದರ್‌ ಜಿಲ್ಲಾ ಜಾನಪದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:16 IST
Last Updated 7 ಫೆಬ್ರುವರಿ 2021, 15:16 IST
ಬೀದರ್‌ನಲ್ಲಿ ಭಾನುವಾರ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ನಾಟ್ಯಶ್ರೀ ನೃತ್ಯಾಲಯದ ನಿದೇರ್ಶಕಿ ರಾಣಿ ಸತ್ಯಮೂರ್ತಿ ಅವರನ್ನು ಅಲಂಕೃತ ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆ ತರಲಾಯಿತು
ಬೀದರ್‌ನಲ್ಲಿ ಭಾನುವಾರ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ನಾಟ್ಯಶ್ರೀ ನೃತ್ಯಾಲಯದ ನಿದೇರ್ಶಕಿ ರಾಣಿ ಸತ್ಯಮೂರ್ತಿ ಅವರನ್ನು ಅಲಂಕೃತ ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆ ತರಲಾಯಿತು   

ಬೀದರ್‌: ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಮತ್ತು ಎರಡನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ನಾಟ್ಯಶ್ರೀ ನೃತ್ಯಾಲಯದ ನಿದೇರ್ಶಕಿ ರಾಣಿ ಸತ್ಯಮೂರ್ತಿ ಮೆರವಣಿಗೆ ನಗರದಲ್ಲಿ ನಡೆಯಿತು.

ಜನವಾಡ ರಸ್ತೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣನ್ ಸಾಳೆ ಮೆರವಣಿಗೆಗೆ ಚಾಲನೆ ನೀಡಿದರು.

ಕಬ್ಬು ಹಾಗೂ ಮಾವಿನ ಎಲೆ ಕಟ್ಟಿದ ಅಲಂಕೃತ ಬಂಡಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಕರ್ನಾಟಕ ಸಾಹಿತ್ಯ ಸಭಾಂಗಣದ ವರೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು.

ADVERTISEMENT

ಮಹಿಳಾ ಕೋಲಾಟ, ಡೊಳ್ಳು ಕುಣಿತ, ಗೊಂಬೆ ಕುಣಿತ, ಲಂಬಾಣಿ ನೃತ್ಯ, ಭಜನಾ ತಂಡಗಳು ಮೆರವಣಿಗೆಗೆ ಕಳಿಕಟ್ಟಿದ್ದವು. ಅನೇಕ ಮಹಿಳೆಯರು ಸಾಂಪ್ರದಾಯಿಕ ಪೋಷಾಕು ಧರಿಸಿ ಗಮನ ಸೆಳೆದರು.

ಚಿಂತಕ ಬಾಬುರಾವ್ ಪಾಸ್ವಾನ್, ಕನ್ನಡಪರ ಹೋರಾಟಗಾರ ಶ್ರೀಮಂತ ಸಪಾಟೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ರಾಜಕುಮಾರ ಪಸಾರೆ, ಸಿದ್ದು ಫುಲಾರಿ, ಎಂ.ಪಿ. ಮುದಾಳೆ, ಯೋಗೇಂದ್ರ ಯದಲಾಪುರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.