ADVERTISEMENT

ಬೀದರ್: ಡಿ. 4 ರಂದು ಕನಕದಾಸ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 12:55 IST
Last Updated 2 ಡಿಸೆಂಬರ್ 2022, 12:55 IST
ರಾಜೇಂದ್ರಕುಮಾರ ಗಂದಗೆ
ರಾಜೇಂದ್ರಕುಮಾರ ಗಂದಗೆ   

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಡಿ. 4 ರಂದು ಸಂಜೆ 6ಕ್ಕೆ ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕನಕದಾಸ ಜಯಂತ್ಯುತ್ಸವ ಹಮ್ಮಿಕೊಂಡಿದೆ.

ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಉದ್ಘಾಟಿಸುವರು. ಶಾಸಕ ಬಂಡೆಪ್ಪ ಕಾಶೆಂಪುರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಸಹ ಪ್ರಾಧ್ಯಾಪಕಿ ಡಾ. ಸುನೀತಾ ಕೂಡ್ಲಿಕರ್ ಕನಕದಾಸರ ಕುರಿತು ಉಪನ್ಯಾಸ ನೀಡುವರು. ರಾಷ್ಟ್ರಮಟ್ಟದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕøತೆ ಲಕ್ಷ್ಮಿ ಮೇತ್ರೆ ಅವರನ್ನು ಸನ್ಮಾನಿಸಲಾಗುವುದು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತ ಚಿದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಕಾಶೆಂಪುರ, ಮಾಜಿ ಸದಸ್ಯರಾದ ಅಮೃತರಾವ್ ಚಿಮಕೋಡೆ, ಬಾಬುರಾವ್ ಮಲ್ಕಾಪುರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ನರಸಪ್ಪ ದೇವಗೊಂಡ, ಶಿವಾಜಿ ಡೋಣೆ, ರಮೇಶ ಪಾಟೀಲ, ವಿಶ್ವನಾಥ ಜಿಳ್ಳೆ, ಡಾ. ಅನಿಲ್ ರಾಯಪಳ್ಳಿ, ಅರುಣ ದಸ್ತಗೊಂಡ, ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಹಣಮಂತ ಮಲ್ಕಾಪುರ, ಮಹಾದೇವಿ ಬಸವರಾಜ, ಪ್ರಮುಖರಾದ ಮಲ್ಲಿಕಾರ್ಜುನ ಬಾವಗೆ, ಎಂ.ಎಸ್. ಕಟಗಿ, ಬಸವರಾಜ ಮಾಳಗೆ, ಮಾಳಪ್ಪ ಅಡಸಾರೆ, ಸಂತೋಷಕುಮಾರ ಜೋಳದಾಪಕೆ, ಪೀರಪ್ಪ ಯರನಳ್ಳಿ, ಪಿ.ಎಸ್. ಇಟಕಂಪಳ್ಳಿ, ಸಂಜೀವಕುಮಾರ ಅತಿವಾಳೆ, ರವೀಂದ್ರ ಲಂಜವಾಡಕರ್, ಶರಣಪ್ಪ ಮಲಗೊಂಡ, ಹಣ್ಮು ಪಾಜಿ, ಶಂಕರ ಬಾಪುರೆ, ಶ್ರೀಪತಿ ಮೇತ್ರೆ, ವಿಜಯಕುಮಾರ ಡುಮ್ಮೆ, ಬಕ್ಕಪ್ಪ ನಿರ್ಣಾಕರ್, ಮನೋಹರ ಕಾಶಿ, ಸಂತೋಷ ಮುದ್ದಾ, ಗಣಪತಿ ಜಮಾದಾರ್, ವೀರೇಂದ್ರ ಮೇತ್ರೆ, ದಶರಥ ಕೋಟೆಕರ್, ಗಜರಾಬಾಯಿ ಪಾಲ್ಗೊಳ್ಳುವರು.
ನೌಕರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT