ADVERTISEMENT

ಬೀದರ್: ಸಿಎಂ ಸ್ವಾಗತಕ್ಕೆ ಉಜಳಂಬ ಸಿದ್ಧ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 4:49 IST
Last Updated 27 ಜೂನ್ 2019, 4:49 IST
ಮುಖ್ಯಮಂತ್ರಿಯನ್ನು ಕರೆತರಲಿರುವ ಎತ್ತಿನಬಂಡಿ
ಮುಖ್ಯಮಂತ್ರಿಯನ್ನು ಕರೆತರಲಿರುವ ಎತ್ತಿನಬಂಡಿ   

ಬಸವಕಲ್ಯಾಣ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ವಾಗತಕ್ಕೆ ಉಜಳಂಬ ಗ್ರಾಮವು ಸಜ್ಜುಗೊಂಡಿದೆ. ಮುಖ್ಯಮಂತ್ರಿ ಜನತಾ ದರ್ಶನ ನಡೆಸಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದ ಸುತ್ತ ಪೊಲೀಸ್ ಸರ್ಪಗಾವಲು ಇದೆ.

ತಪಾಸಣೆ ನಂತರವೇ ಜನರನ್ನು ಒಳಗೆಬಿಡಲಾಗುತ್ತಿದೆ. ಜನತಾ ದರ್ಶನದಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಣಿ ಆರಂಭಿಸಿದ್ದಾರೆ.

ಮುಖ್ಯಮಂತ್ರಿಯನ್ನು ಕರೆತರಲು ಎತ್ತಿನಬಂಡಿ ಸಿದ್ಧಗೊಳ್ಳುತ್ತಿದೆ. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ಎಲ್ಲೆಡೆ ಕಾಣುತ್ತಿದ್ದಾರೆ.ಜನರು ಗುಂಪುಗುಂಪಾಗಿ ಬರುತ್ತಿದ್ದಾರೆ.

ADVERTISEMENT

ಸಾರ್ವಜನಿಕರ ವಾಹನಗಳನ್ನು ಊರ ಹೊರ ಭಾಗದಲ್ಲಿ ಒಂದು ಕಿ.ಮಿ. ದೂರದಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಅಲ್ಲಿಂದ ಸಭಾ ಮಂಟಪದವರೆಗೆ ನಡೆದುಕೊಂಡು ಬರಬೇಕಾಗುತ್ತಿದೆ.

ಇನ್ನಷ್ಟು...

ಉಮಳಂಬ ಗ್ರಾಮದಲ್ಲಿ ಪೊಲೀಸ್ ಭದ್ರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.