ADVERTISEMENT

ಬೀದರ್: ಸಂಭ್ರಮದ ವೈಕುಂಠ ಏಕಾದಶಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 10:15 IST
Last Updated 7 ಜನವರಿ 2020, 10:15 IST
ವೈಕುಂಠ ಏಕಾದಶಿ ಪ್ರಯುಕ್ತ ಬೀದರ್‌ನ ಅನಂತಶಯನ ಮಂದಿರದಲ್ಲಿ ಭಕ್ತರು ಸೋಮವಾರ ದರ್ಶನ ಪಡೆದರು
ವೈಕುಂಠ ಏಕಾದಶಿ ಪ್ರಯುಕ್ತ ಬೀದರ್‌ನ ಅನಂತಶಯನ ಮಂದಿರದಲ್ಲಿ ಭಕ್ತರು ಸೋಮವಾರ ದರ್ಶನ ಪಡೆದರು   

ಬೀದರ್: ಇಲ್ಲಿಯ ರಾಂಪುರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹೋಮ–ಹವನ, ವಿಶೇಷ ಪೂಜೆ, ಅರ್ಚನೆ ಮತ್ತಿತರ ಕಾರ್ಯಕ್ರಮಗಳಲ್ಲಿ ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡರು.

ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ವಿಶೇಷ ಅಭಿಷೇಕ, ಪುಷ್ಪಾಲಂಕಾರ, ಕಮಲ ಪುಷ್ಪ ಯಾಗದ ಸಂಕಲ್ಪ, ಸಾಮೂಹಿಕ ಸತ್ಯನಾರಾಯಣ ವೃತ, ಮಧ್ಯಾಹ್ನ ಪುಷ್ಪ ಯಾಗದ ಪೂರ್ಣಾಹುತಿ, ಮಹಾ ಮಂಗಳಾರತಿ, ಸಾಮೂಹಿಕ ಭಗವದ್ಗೀತೆ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಪಾಂಡುರಂಗ ಮಹಾರಾಜರಿಂದ ಭಜನೆ, ಕೀರ್ತನೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಲಕ್ಷ್ಮಿ ಸತ್ಯನಾರಾಯಣ ಚಾರಿಟಬಲ್ ಟ್ರಸ್ಟ್ ಮತ್ತು ಲಕ್ಷ್ಮಿ ಸತ್ಯನಾರಾಯಣ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಮೈಲಾಪುರ, ನರಸಿಂಹ ವಾಸುದೇವ ದೀಕ್ಷಿತ ಭಾಗವಹಿಸಿದ್ದರು. ಅನಂತಶಯನ ಮಂದಿರದಲ್ಲಿಯೂ ಆಚರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.