ADVERTISEMENT

ರಸ್ತೆಯಲ್ಲಿ ನೀರು; ಸಂಚಾರಕ್ಕೆ ಅಡ್ಡಿ

ಬೆಳೆಗಳು ನೀರು ಪಾಲು: ರೈತರಿಗೆ ಮತ್ತೆ ಸಂಕಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:13 IST
Last Updated 11 ಜುಲೈ 2021, 6:13 IST
ಕಮಲನಗರ ತಾಲ್ಲೂಕಿನ ದಾಬಕಾ– ಖೇರ್ಡಾ ಗ್ರಾಮಗಳ ಮಧ್ಯೆ ಬರುವ ಕೆಳ ಸೇತುವೆ ಮೇಲಿಂದ ಮಳೆ ನೀರು ಹರಿದು ಹೋಗುತ್ತಿರುವುದು
ಕಮಲನಗರ ತಾಲ್ಲೂಕಿನ ದಾಬಕಾ– ಖೇರ್ಡಾ ಗ್ರಾಮಗಳ ಮಧ್ಯೆ ಬರುವ ಕೆಳ ಸೇತುವೆ ಮೇಲಿಂದ ಮಳೆ ನೀರು ಹರಿದು ಹೋಗುತ್ತಿರುವುದು   

ಕಮಲನಗರ: ತಾಲ್ಲೂಕು ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ, ತಡರಾತ್ರಿ ಧಾರಾಕಾರ ಮಳೆ ಸುರಿಯಿತು.

ಡೋಣಗಾಂವ್, ಸೋನಾಳ, ಕಳಗಾಪುರ, ಠಾಣಾಕುಶನೂರು, ಬೆಳಕುಣಿ, ದಾಬಕಾ, ಮುರ್ಕಿ, ಹೊಕರ್ಣಾ, ಭಂಡಾರಕುಮಟಾ, ಮುಧೋಳ, ಹೊಳಸಮುದ್ರ ಗ್ರಾಮಗಳಲ್ಲಿ ಮಳೆ ಸುರಿದಿದೆ.

ಎರಡು ದಿನಗಳಿಂದ ಅಲ್ಪ ಬಿಸಿಲು ಇದ್ದಿದ್ದರಿಂದ ಹೆಸರು, ಸೋಯಾ, ತೊಗರಿಗೆ ಕಳೆ ತೆಗೆಯಲು, ಎಡೆಕುಂಟೆ ಹೊಡೆಯಲು, ಔಷಧಿ ಸಿಂಪಡಣೆಗೆ ಮುಂದಾಗಿದ್ದ ರೈತರು ಸಂಜೆ ಸುರಿದ ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.

ADVERTISEMENT

‘ಮುಂಗಾರು ಹಂಗಾಮಿನ ಇತರೆ ಬೆಳೆಗಳಿಗೆ ಹೊಲಿಸಿದಲ್ಲಿ ಹೆಸರು ಬೆಳೆ ಸೂಕ್ಷ್ಮ. ಅಧಿಕ ಮಳೆ ಸುರಿದರೆ ತಡೆದುಕೊಳ್ಳುವ ಶಕ್ತಿ ಈ ಬೆಳೆಗೆ ಇರುವುದಿಲ್ಲ’ ಎಂದು ರೈತರು ತಿಳಿಸಿದರು.

ಅಧಿಕ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಳಸೇತುವೆಗಳ ಮೇಲೆ ಮಳೆ ನೀರು ಹರಿದು ಗಂಟೆಗಳ ಕಾಲ ಉದಗೀರ-ಔರಾದ್, ಚಿಕ್ಲಿ-ಕಮಲನಗರ, ದಾಬಕಾ-ಖೇರ್ಡಾ, ಮುರ್ಕಿ ವಿವಿಧ ಗ್ರಾಮಕ್ಕೆ ತೆರಳುವ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.