
ಪ್ರಜಾವಾಣಿ ವಾರ್ತೆ
ಕಾಡು ಹಂದಿ
ಔರಾದ್: ತಾಲ್ಲೂಕಿನ ಎಕಂಬಾ ಬಳಿ ಮಂಗಳವಾರ ಸಂಜೆ ಕಾಡು ಹಂದಿ ದಾಳಿ ಮಾಡಿ, ಮಗು ಸೇರಿದಂತೆ ಮೂವರನ್ನು ಗಾಯಗೊಳಿಸಿದೆ.
ಹುಲ್ಯಾಳದಿಂದ ಔರಾದ್ ಕಡೆ ಬೈಕ್ ಮೇಲೆ ಬರುತ್ತಿದ್ದ ಗೌತಮ ಶಂಕರ ಹಾಗೂ ಅವರ ನಾಲ್ಕು ವರ್ಷದ ಮಗ ಬಾಲರಾಜ ಹಾಗೂ 2 ವರ್ಷದ ಮಗಳು ಸಂಸ್ಕೃತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಈ ಮೂವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.