ADVERTISEMENT

ಅತಂತ್ರ ಸ್ಥಿತಿಯಲ್ಲಿ ಗುತ್ತಿಗೆ ನೌಕರರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 6:00 IST
Last Updated 17 ಏಪ್ರಿಲ್ 2018, 6:00 IST

ಯಳಂದೂರು: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ 11 ಹೊರಗುತ್ತಿಗೆ ನೌಕರರು ಸಂಬಳವೂ ಇಲ್ಲದೆ, ಇತ್ತ ಕೆಲಸವನ್ನೂ ಬಿಡದ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪನ್ನಾಗ ಎಂಟರ್ ಪ್ರೈಸಸ್ ಕಂಪನಿಯು 11 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಈ ಕಂಪನಿಯ ಟೆಂಡರ್‌ ಮುಗಿದು 5 ತಿಂಗಳಾಗಿದ್ದು, ಐದು ತಿಂಗಳ ವೇತನ ಬಾಕಿ ಉಳಿಸಿದೆ. ಅಲ್ಲದೇ, ಅವಧಿ ಮುಗಿದ ಮೇಲೂ ಪ.ಪಂ ಅಧಿಕಾರಿಗಳೂ ಇವರ ಕರ್ತವ್ಯವನ್ನು ಮುಂದುವರಿಸಿದ್ದು ಪ.ಪಂ ಸಹ 5 ತಿಂಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ನೌಕರರು ಆರೋಪಿಸಿದ್ದಾರೆ.

ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುವ ಬಗ್ಗೆ ಈಗಾಗಲೇ ಸಭೆ ಕರೆದು ತೀರ್ಮಾನಿಸಲಾಗಿದೆ. ಇದನ್ನು ಪಂಚಾಯಿತಿಗೆ ಬರುವ ಆದಾಯದಲ್ಲೇ ಸರಿದೂಗಿಸಬೇಕು. ಆದರೆ ಪಂಚಾಯಿತಿಗೆ ಆದಾಯದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸಿ ಸಂಬಳ ನೀಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಎಸ್. ಉಮಾಶಂಕರ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.