ADVERTISEMENT

ಮಾಂಸಕ್ಕಾಗಿ ಕಾಡೆಮ್ಮೆ ಬೇಟೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 10:05 IST
Last Updated 9 ಆಗಸ್ಟ್ 2012, 10:05 IST
ಮಾಂಸಕ್ಕಾಗಿ ಕಾಡೆಮ್ಮೆ ಬೇಟೆ: ಆರೋಪಿ ಸೆರೆ
ಮಾಂಸಕ್ಕಾಗಿ ಕಾಡೆಮ್ಮೆ ಬೇಟೆ: ಆರೋಪಿ ಸೆರೆ   

ಚಾಮರಾಜನಗರ: ಮಾಂಸಕ್ಕಾಗಿ ಕಾಡೆಮ್ಮೆಯನ್ನು ಬೇಟೆಯಾಡಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ನಂಜುಂಡಯ್ಯ ಬಂಧಿತ. ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ(ಬಿಆರ್‌ಟಿ)ದ ವ್ಯಾಪ್ತಿಯ ಅಟ್ಟುಗುಳಿಪುರದ ಉಪ್ಪಳ ಪ್ರದೇಶದ ಬಳಿ ಕಾಡೆಮ್ಮೆಯನ್ನು ಕೊಂದು ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಳಿದ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ನಾಗರಾಜು ಹಾಗೂ ವಲಯ ಅರಣ್ಯ ಅಧಿಕಾರಿ ಎ.ಖಾನ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾದ ಎಸ್.ಲೋಹಿತ್, ರವಿ, ಬಿ.ಮಾಲಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

`ಆರೋಪಿಯ ವಿಚಾರಣೆ ವೇಳೆ ಮಾಂಸಕ್ಕಾಗಿ ಕಾಡೆಮ್ಮೆ ಬೇಟೆ ಯಾಡಿರುವ ಅಂಶ ತಿಳಿದುಬಂದಿದೆ. ತನಿಖೆ ಮುಂದುವರಿದಿದ್ದು, ಶೀಘ್ರವೇ ಇನ್ನುಳಿದ ಆರೋಪಿಗಳನ್ನು  ಬಂಧಿಸ ಲಾಗುವುದು~ ಎಂದು ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ವಿಜಯ್ ಮೋಹನ್‌ರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.