ಚಾಮರಾಜನಗರ: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಸೇವೆ ಆರಂಭವಾಗಿದ್ದು, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಆಧಾರ್ ನೋಂದಣಿ (ಬಾಲ ಆಧಾರ್) ಹಾಗೂ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡುವ ಸೇವೆ ಮಾತ್ರ ಇಲ್ಲಿ ಲಭ್ಯವಿದೆ.
ಇನ್ನು ಮುಂದೆ ಪೋಸ್ಟ್ ಮ್ಯಾನ್ಗಳ ಮೂಲಕ ಆಧಾರ್ ಮೊಬೈಲ್ ಜೋಡಣೆ ಸೇವೆಯನ್ನೂ ಪಡೆಯಬಹುದು.
ಉಳಿದಂತೆ ಇ–ಆಡಳಿತ ಕೇಂದ್ರ, ಅಟಲ್ಜೀ ಜನ ಸ್ನೇಹಿ ಕೇಂದ್ರ, ಬ್ಯಾಂಕ್ ಹಾಗೂ ಅಂಚೆ ಕಚೇರಿ ಸೇರಿದಂತೆ ಜಿಲ್ಲೆಯಾದ್ಯಂತ 34 ಕೇಂದ್ರಗಳಲ್ಲಿಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಒದಗಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ, ನೋಂದಣಿ, ಬಯೊಮೆಟ್ರಿಕ್ ಪರಿಷ್ಕರಣೆ, ಮೊಬೈಲ್ ಸಂಖ್ಯೆಯ ಜೋಡಣೆ ಸೇರಿದಂತೆ ಆದಾರ್ಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಪಡೆಯಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ವೆಬ್ಸೈಟ್ uidai.gov.in, ಟೋಲ್ ಫೀ ನಂ: 1947 ಹಾಗೂ ಇ-ಮೇಲ್ ಐಡಿ: uid.cha@karanataka.gov.in ನಲ್ಲಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.