ಸಂತೇಮರಹಳ್ಳಿ: ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ ಸಂಬಂಧವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಕುದೇರು ಶಿವನಾಗಣ್ಣ ಮಾತನಾಡಿ, ‘ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಪುತ್ಥಳಿ ಸ್ಥಾಪನೆ ಮಾಡುವುದು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ಬೋಸ್, ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಅವರುಗಳನ್ನು ಭೇಟಿ ಮಾಡಿ ಆದಷ್ಟು ಬೇಗನೆ ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ನಡೆಸಬೇಕಾಗಿದೆ’ ಎಂದು ಮನವಿ ಮಾಡಿದರು.
ಟ್ರಸ್ಟ್ನ ಸದಸ್ಯರಾದ ಸಿ.ರಾಜೇಂದ್ರ, ಆರ್.ರಮೇಶ್, ಸಿ.ಬಸವಣ್ಣ, ಡಿ.ಎಸ್.ಮಾದೇಶ್, ಜೆ.ಎಂ.ಶಶಿಕುಮಾರ್, ಡಿ.ಎಂ.ಸಿದ್ದಪ್ಪಾಜಿ, ಜಯಶಂಕರ್, ಎಂ.ಸೋಮಣ್ಣ, ಎಂ.ಮಹದೇವಸ್ವಾಮಿ, ಎಂ.ದೊರೆರಾಜು, ಕೆಂಪರಾಜು, ಕೆ.ಬಸವಣ್ಣ, ಎಸ್.ಪುಟ್ಟಸ್ವಾಮಿ, ಟಿ.ಕೆ.ಮಹದೇವಯ್ಯ, ರಾಜು, ರುದ್ರಯ್ಯ, ನವಿಲೂರುರಾಜು, ಬಾಗಳಿ ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.