ADVERTISEMENT

ನೀರುಪಾಲಾಗಿದ್ದ ದಂಪತಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 15:51 IST
Last Updated 20 ಮೇ 2020, 15:51 IST
ಕೆಂಪಣ್ಣ, ಪೂರ್ಣಿಮಾ
ಕೆಂಪಣ್ಣ, ಪೂರ್ಣಿಮಾ   

ಸಂತೇಮರಹಳ್ಳಿ:ಕಬಿನಿ ನಾಲೆಗೆ ಹಾರಿ ನೀರು ಪಾಲಾಗಿದ್ದ ದಂಪತಿ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ.

ಕೆಂಪಣ್ಣನ ಮೃತದೇಹ ಕಮರವಾಡಿ ಬಳಿ ಪತ್ತೆಯಾದರೆ, ಅವರ ಪತ್ನಿ ಪೂರ್ಣಿಮಾ ಮೃತದೇಹ ಹಲ್ಲೇಪುರದ ಬಳಿ ಪತ್ತೆಯಾಗಿದೆ.

ಮಂಗಳವಾರ ತಮ್ಮ ಪುತ್ರನ ಜೊತೆ ಆಲ್ದೂರು ಗ್ರಾಮದಿಂದ ದೇಮಹಳ್ಳಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ವಾಪಾಸಾಗುತ್ತಿದ್ದ ದಂಪತಿ, ಮಗನನ್ನು ಅಲ್ಲೇ ಬಿಟ್ಟು ನಾಲೆಗೆ ಹಾರಿದ್ದರು. ನೀರು ರಭಸವಾಗಿ ಹರಿಯುತ್ತಿದ್ದರಿಂದ ಇಬ್ಬರೂ ಕೊಚ್ಚಿ ಹೋಗಿದ್ದರು. ಸಂಜೆಯವರೆಗೂ ಇಬ್ಬರೂ ಪತ್ತೆಯಾಗಿರಲಿಲ್ಲ.

ADVERTISEMENT

ಬುಧವಾರ ಇಬ್ಬರ ಶವಗಳುಕಮರವಾಡಿ ಹಾಗೂ ಹುಲ್ಲೇಪುರದ ಬಳಿ ಪತ್ತೆಯಾದವು. ನಂತರ ದೇಹಗಳನ್ನು ನೀರಿನಿಂದ ಹೊರ ತೆಗೆಯಲಾಯಿತು. ಸ್ಥಳಕ್ಕೆ ಬಂದ ಇಬ್ಬರ ಪೋಷಕರು ಹಾಗೂ ಸಂಬಂಧಿಕರು ಮೃತದೇಹಗಳ ಎದುರು ಕಣ್ಣೀರಿಟ್ಟರು.

ಕುದೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.