ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಸರಳ ಈದ್‌ ಮಿಲಾದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:29 IST
Last Updated 30 ಅಕ್ಟೋಬರ್ 2020, 15:29 IST
ಈದ್ ಮಿಲಾದ್ ಪ್ರಯುಕ್ತ ಚಾಮರಾಜನಗರದ ಫಾತೀಮಾ ಮಸೀದಿಯಲ್ಲಿ ಧರ್ಮಗುರುಗಳಾದ ಸೈಯದ್ ಮುಕ್ತಾರ್ ಅಹಮದ್ ಅವರು ಪ್ರವಚನ ನೀಡಿದರು. ಧರ್ಮಗುರು ಮುಫ್ತಿ ಜಾಫರ್ ಹುಸೇನ್ ಖಾಸ್ಮಿ ಇದ್ದಾರೆ
ಈದ್ ಮಿಲಾದ್ ಪ್ರಯುಕ್ತ ಚಾಮರಾಜನಗರದ ಫಾತೀಮಾ ಮಸೀದಿಯಲ್ಲಿ ಧರ್ಮಗುರುಗಳಾದ ಸೈಯದ್ ಮುಕ್ತಾರ್ ಅಹಮದ್ ಅವರು ಪ್ರವಚನ ನೀಡಿದರು. ಧರ್ಮಗುರು ಮುಫ್ತಿ ಜಾಫರ್ ಹುಸೇನ್ ಖಾಸ್ಮಿ ಇದ್ದಾರೆ   

ಚಾಮರಾಜನಗರ: ಪ್ರವಾದಿ ಮಹಮ್ಮದ್‌ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ಮುಸ್ಲಿಮರು ಶುಕ್ರವಾರ ಈದ್ ಮಿಲಾದ್‌ ಹಬ್ಬವನ್ನು ಸರಳವಾಗಿ ಆಚರಿಸಿದರು. ‌‌ಈ ವರ್ಷ ಕೋವಿಡ್‌ ಕಾರಣದಿಂದ ‌ಅದ್ಧೂರಿ ಆಚರಣೆ ಇರಲಿಲ್ಲ.

ಮಸೀದಿ, ದರ್ಗಾ ಹಾಗೂ ಇನ್ನಿತರ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೆ ಸರಳವಾಗಿ ಆಚರಿಸುವಂತೆ ವಕ್ಫ್‌ ಇಲಾಖೆ ಸೂಚಿಸಿತ್ತು. ‌

ಹಬ್ಬದ ಪ್ರಯುಕ್ತ ನಡೆಸಲಾಗುತ್ತಿದ್ದ ಸಾಮೂಹಿಕ ಮೆರವಣಿಗೆ, ಸಭೆ-ಸಮಾರಂಭಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆಯನ್ನೂ ಜಿಲ್ಲಾಡಳಿತ ನಿಷೇಧಿಸಿತ್ತು.

ADVERTISEMENT

ಆದ್ದರಿಂದ ಈ ಬಾರಿಯ ಆಚರಣೆ ಮಸೀದಿಗಳಿಗೆ ಮಾತ್ರ ಸೀಮಿತವಾಗಿತ್ತು. ಹಬ್ಬದ ಅಂಗವಾಗಿ ಪುರುಷರು ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಿದರೆ, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಮನೆಗಳಲ್ಲಿ ಪ್ರಾರ್ಥನೆ, ಕುರ್‌ ಅನ್‌ ಪಠಿಸಿದರು. ‌

ಮಸೀದಿಗಳಲ್ಲಿ ಧರ್ಮಗುರುಗಳು ಪ್ರವಚನ ನಡೆಸಿಕೊಟ್ಟರು. ಪ್ರವಾದಿ ಅವರ ಜೀವನ ಸಂದೇಶಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.