ಗುಂಡ್ಲುಪೇಟೆ: ತಾಲ್ಲೂಕಿನ ಕುಂದುಕೆರೆ ಗ್ರಾಮದಲ್ಲಿ ಪತಿ ಮತ್ತು ಪತ್ನಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ರೈತ ಮುಖಂಡ ಸಂಪತ್ತು ಮತ್ತು ಪತ್ನಿ ಮಂಗಳಮ್ಮ ಅವರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.ಮೊದಲನೇ ವಾರ್ಡಿನಿಂದ ಮಂಗಳಮ್ಮ ಸ್ಪರ್ಧಿಸಿದ್ದರೆ, ಎರಡನೇ ವಾರ್ಡ್ನಿಂದ ಸಂಪತ್ತು ಕಣಕ್ಕಿಳಿದಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ರೈತರ ಸಮಸ್ಯೆ ಬಗೆಹರಿಸುವ ನಾಯಕರು ಕಡಿಮೆಯಾಗುತ್ತಿದ್ದಾರೆ. ಸಮಸ್ಯೆ ಎದುರಾದರೆ ಪ್ರತಿಭಟನೆಗೆ ಅಷ್ಟೇ ಸೀಮಿತವಾಗಿದೆ. ಸ್ವತಃ ರೈತನಾಗಿರುವ ನನಗೆ ಸಮಸ್ಯೆ ಬಗ್ಗೆ ಅರಿವಿದೆ. ನಮ್ಮ ಸಮಸ್ಯೆ ಮತ್ತು ಬೇಡಿಕೆಯನ್ನು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ತಿಳಿಸುವ ಸಲುವಾಗಿ ಇಬ್ಬರೂ ಸ್ಪರ್ಧಿಸಲು ನಿರ್ಧರಿಸಿದ್ದೇವೆ’ ಎಂದು ಸಂಪತ್ತು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.