
ಸಾವು
(ಪ್ರಾತಿನಿಧಿಕ ಚಿತ್ರ)
ಕೊಳ್ಳೇಗಾಲ: ತಾಲ್ಲೂಕಿನ ಹೊಸ ಹಂಪಾಪುರ ಹಾಗೂ ಮುಳ್ಳೂರು ಗ್ರಾಮದ ರಸ್ತೆಯ ಹೊನ್ನಹೊಳೆ ಸೇತುವೆಯ ಮೇಲಿಂದ ಕುಡಿದ ಮತ್ತಿನಲ್ಲಿ ನೀರಿಗೆ ಜಿಗಿದಿದ್ದ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ.
ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ವಿಷಕಂಠ ಮೂರ್ತಿ(38) ಮೃತ ವ್ಯಕ್ತಿ. ಈತ ಬಸ್ತೀಪುರದಲ್ಲಿ ವಾಸವಿದ್ದರು. ಶನಿವಾರ ಕೆಲಸ ಮುಗಿಸಿಕೊಂಡು ಹಂಪಾಪುರದ ಹೊನ್ನಹೊಳೆಯಲ್ಲಿ ಮೀನು ಹಿಡಿಯುವ ಸಲುವಾಗಿ ಹೋಗಿದ್ದಾಗ ಅತಿಯಾದ ಮದ್ಯಸೇವನೆ ಮಾಡಿ ನೀರಿಗೆ ಜಿಗಿದು ಮೃತಪಟ್ಟಿದ್ದಾರೆ. ಶನಿವಾರ ಅಗ್ನಿಶಾಮಕದಳದ ಸಿಬ್ಬಂದಿ ನೀರಿಗಿಳಿದು ನಾಲ್ಕು ಗಂಟೆ ಶೋಧ ನಡೆಸಿದ್ದರು. ಶವ ಸಿಕ್ಕಿರಲಿಲ್ಲ. ಭಾನುವಾರ ನದಿಯಲ್ಲಿ ಶವ ತೆಲಿ ಬಂದಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.