
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಸಂತೇಮರಹಳ್ಳಿ: ಸಂತೇಮರಹಳ್ಳಿ ವೃತ್ತದಿಂದ ಕುದೇರು ರಸ್ತೆ ಕಡೆಗೆ ಸಾಗುವಾಗ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೂಡಲ ಅಗ್ರಹಾರ ಗ್ರಾಮದ ಕೇಬಲ್ ನಾಗೇಶ್ (55) ಮೃತ ವ್ಯಕ್ತಿ. ಭಾನುವಾರ ರಸ್ತೆಯಲ್ಲಿ ಹೋಗುವಾಗ ಯಳಂದೂರು ಕಡೆಯಿಂದ ಬಂದ ಡಿಕ್ಕಿ ಹೊಡೆದು ನಾಗೇಶ್ ಸಾವನ್ನಪ್ಪಿದ್ದಾರೆ. ಸಂತೇಮರಹಳ್ಳಿ ಠಾಣೆ ಪೊಲೀಸರು ಬಸ್ ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.