ಮಹದೇಶ್ವರ ಬೆಟ್ಟ: ಮಾದೇಶ್ವರ ದೇವಾಲಯದಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣ ಪರ್ಕಾವಣೆ ಹಾಗೂ ಎಣಿಕೆ ಕಾರ್ಯ ಬುಧವಾರ ಜರುಗಿತು.
ಕಳೆದ 30 ದಿನಗಳ ಹುಂಡಿ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಕಾರ್ಯ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ಇದರಲ್ಲಿ ನಾಣ್ಯ ಸೇರಿ ಒಟ್ಟು ₹2,58,44,097 (ಎರಡು ಕೋಟಿ 58 ಲಕ್ಷದ 44, ಸಾವಿರದ 97 ರೂಪಾಯಿ) ಸಂಗ್ರಹವಾಗಿದ್ದು 93 ಗ್ರಾಂ ಚಿನ್ನ ಹಾಗೂ 3 ಕೆಜಿ 350 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿವೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು ಹಾಗೂ ಪ್ರಾಧಿಕಾರದ ನೌಕರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.